ಆರೋಗ್ಯಕ್ಕೆ ಒಂಬತ್ತೇ ಮೆಟ್ಟಿಲು… ಕಾರ್ತಿಕ್ ಕೃಷ್ಣ ಬರಹ
ಮುಂದಿನ ಬಾರಿ ನೀವು ಮೆಟ್ರೋ ನಿಲ್ದಾಣಕ್ಕೆ ಹೋದಾಗ, ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ಮೇಲೆ ಓಡಾಡುವ ತಲೆಗಳನ್ನು ಲೆಕ್ಕ ಹಾಕಲು ಟ್ರೈ ಮಾಡಿ. ಮೆಟ್ಟಿಲನ್ನು ಬಳಸುವ ಜನರ ಲೆಕ್ಕ ನಿಮಗೆ ಆರಾಮಾಗಿ ಸಿಕ್ಕಿಬಿಡುತ್ತದೆ. ಎಸ್ಕಲೇಟರ್ ಮೇಲಿನ ಮಾನವರ ತಲೆಗಳನ್ನು ಎಣಿಸುವುದು ಮಾತ್ರ ತಾರೆಗಳನ್ನು ಕಲೆಹಾಕಿದಷ್ಟೇ ಕಷ್ಟವಾಗಬಹುದು. ಇದಕ್ಕೆ ಕಲಶಪ್ರಾಯವಾಗಿ, ಮೊಬೈಲ್ ಫೋನು ನೋಡುತ್ತಾ, ಮೆಟ್ಟಿಲುಗಳ ಬಳಿ ಬಂದು, ಕೂಡಲೇ ಮುಖವನ್ನು ಸಿಂಡರಿಸಿಕೊಂಡು, ಪಕ್ಕದ ಎಸ್ಕಲೇಟರ್ ಏರಿದ ಹೋಮೋ ಸೇಪಿಯನನ್ನು ಕೆ ಆರ್ ಪುರ ಮೆಟ್ರೋ ನಿಲ್ದಾಣದಲ್ಲಿ ನೋಡಲು ಸಿಕ್ಕಿದ್ದು ನನ್ನ ಸುಕೃತವೋ…
ಮೆಟ್ಟಿಲುಗಳ ಬಳಕೆಯ ಕುರಿತು ಕಾರ್ತಿಕ್ ಕೃಷ್ಣ ಬರಹ ನಿಮ್ಮ ಓದಿಗೆ
ಸ್ಮಾರ್ಟ್ ಬೋರ್ಡ್..!: ಮಹಮ್ಮದ್ ರಫೀಕ್ ಕೊಟ್ಟೂರು ಬರಹ
ಸ್ಮಾರ್ಟ್ ಬೋರ್ಡ್ ಬರುವುದಕ್ಕಿಂತ ಮುಂಚೆ ತರಗತಿ ಮುಗಿಸಿದಾಗ ರಮೇಶ ಅವರ ಅವತಾರ ಮೆಚ್ಚಿ ವಾಹ್ ಶಿಕ್ಷಕರೆಂದರೆ ಹೀಗಿರಬೇಕು ಎನ್ನುವಂತಿದ್ದರು, ಸುಣ್ಣದಿಂದ ಮುಳುಗಿದ ಅವರ ಕೈಗಳು, ಬಣ್ಣ ಬದಲಾಯಿಸಿಕೊಂಡು ಬಿಳಿ ಬಟ್ಟೆಯಂತಿದ್ದ ಅವರ ಪ್ಯಾಂಟ್, ಅಂಗಿ ಅಲ್ಲಲ್ಲಿ ಕೈ ತಗುಲಿ ಮುಖಕ್ಕೂ ಹತ್ತಿದ್ದ ಸೀಮೆ ಸುಣ್ಣದ ಬಿಳಿ ಯಾರೇ ನೋಡಿದರೂ ಇವರು ಗಣಿತ ಶಿಕ್ಷಕರೆಂದು ಗುರುತಿಸಬಹುದಾದ ಮಾದರಿ ರೂಪ.
ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಶೈಕ್ಷಣಿಕ ಬರಹ ನಿಮ್ಮ ಓದಿಗೆ
ಪರ್ವತಗಳು ಬರಹಗಾರರಿಗೆ ಉಪಕಾರಿಯಾಗಿರುತ್ತವೆ..: ಖಂಡಿಗೆ ಮಹಾಲಿಂಗ ಭಟ್ ಬರಹ
‘ಯಾವನು ಬೆಟ್ಟಗಳಿಗೆ ಹೋಗುವನೋ, ಅವನು ತನ್ನ ತಾಯಿಯಲ್ಲಿಗೆ ಹೋಗುವನು’ ಎಂಬುದಾಗಿ ಕಿಪ್ಲಿಂಗ್ ಬರೆದಿರುವನು ಮತ್ತು ಅವನು ಇದರಿಂದ ಹೆಚ್ಚಿನ ಸತ್ಯವನ್ನು ಬರೆದುದು ಅಪರೂಪ. ಯಾಕೆಂದರೆ ಬೆಟ್ಟಗಳಲ್ಲಿ ಜೀವಿಸುವುದು ತನ್ನ ತಾಯಿಯ ಎದೆಯಲ್ಲಿ ಹುದುಗಿಕೊಂಡು ಮಲಗಿದಷ್ಟು ಹಿತಕರವೆನಿಸುತ್ತದೆ. ಪ್ರತಿ ಬಾರಿ ನಾನು ಬೇರೆಡೆಗೆ ಹೋಗಿಪುನಃ ಹಿಂದಿರುಗುವಾಗ ಮನಸ್ಸಿಗೆ ತುಂಬಾ ಹಿತಕರ ಹಾಗೂ ಅಪ್ಯಾಯಕರವೆನಿಸುತ್ತದೆ.
ರಸ್ಕಿನ್ ಬಾಂಡ್ ಅವರ “ರೇನ್ ಇನ್ ದ ಮೌಂಟೇನ್ಸ್” ಕೃತಿಯ ಒಂದು ಬರಹವನ್ನು ಡಾ. ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿಗೆ
ಭಾವಯಾಮಿ ಗೌರೀ..: ದೀಪಾ ಫಡ್ಕೆ ಬರಹ
ವೃತ್ತಿ, ಪ್ರವೃತ್ತಿಗಳ ನಡುವೆ ಉಯ್ಯಾಲೆಯಾಡುತ್ತಿರುವ ಆಧುನಿಕ ಕಾಲದ ಗೌರಿಯರಿಗೆ ತಿಂಗಳಿಗೆ ಮೊದಲೇ ಹಬ್ಬದ ತಯಾರಿ ಅಸಾಧ್ಯ. ಅಡುಗೆ ಮನೆಯ ನಲ್ಲಿಯ ನೀರಲ್ಲಿ `ಗಂಗೇಚ ಯಮುನೇಚೈವ..’ ಎನ್ನುತ್ತಾ ಗಂಗೆಯನ್ನು ಆವಾಹಿಸಿ ಕಲಶ ತುಂಬುವ ನಮಗೆ ನಗರದ ಪುಟ್ಟ ಪುಟ್ಟ ಮನೆಗಳಲ್ಲಿ ಹಬ್ಬವೆಂದರೆ ನಿತ್ಯದ ಒಂದು ಟಬ್ ಪಾತ್ರೆಗಳ ಬದಲು ಎರಡು ಟಬ್ ಪಾತ್ರೆಗಳು ಎಂದೂ ಒಮ್ಮೊಮ್ಮೆ ಕಾಣುವುದಿದೆ.
ಜಗದೆಲ್ಲ ಗೌರಿಯರ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ
ಕ್ಯಾಲಿಫೋರ್ನಿಯಾ ಮತ್ತು ಭೂಕಂಪ: ಗಿರಿಧರ್ ಗುಂಜಗೋಡು ಬರಹ
ನನ್ನ ಹೆದರಿಕೆ ಏನೆಂದರೆ ನಾನು ಟಾಯ್ಲೆಟ್ಟಿನಲ್ಲಿದ್ದಾಗಲೋ ಇಲ್ಲಾ ಸ್ನಾನ ಮಾಡಬೇಕಾದರೋ ಭೂಕಂಪವಾದರೆ ಏನು ಮಾಡೋದು ಅಂತ. ಆ ಅವಸ್ಥೆಯಲ್ಲಿ ಹೊರಗೆ ಓಡುವುದು ಎಷ್ಟು ಮುಜುಗರದ ಸನ್ನಿವೇಶ ಅಂತ ಯೋಚಿಸಿ. ನಾನು ಗೆಳೆಯನೊಟ್ಟಿಗೆ ಮಾತನಾಡುತ್ತಾ ಇದೇ ವಿಷಯ ಹೇಳಿದೆ.
ಕ್ಯಾಲಿಫೋರ್ನಿಯಾದಲ್ಲಾದ ಭೂಕಂಪದ ಅನುಭವಗಳ ಕುರಿತು ಗಿರಿಧರ್ ಗುಂಜಗೋಡು ಬರಹ
ಮುಯ್ಯಿಗೆ ಮುಯ್ಯಿ …!: ವಸಂತಕುಮಾರ್ ಕಲ್ಯಾಣಿ ಪ್ರಬಂಧ
ಇನ್ನೊಬ್ಬ ಸಹೋದ್ಯೋಗಿ ಬ್ರಹ್ಮಚಾರಿ ಸಾಧ್ಯವಾದಷ್ಟು ಕಾರ್ಯಕ್ರಮಗಳಿಗೆ ಕೈ ಕೊಡುತ್ತಿದ್ದ. ನಂತರ ತಡವಾಗಿ ಮದುವೆಯಾದ. ಒಂದು ಮಗುವಾಯಿತು. ಅಷ್ಟೇ ಸಾಕು ಎಂದು ನಿರ್ಧರಿಸಿದ. ಆನಂತರ ಅವನು ಯಾರದಾದರೂ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಮೊದಲನೆಯ ಮದುವೆಗೆ ಹೋಗುತ್ತಿದ್ದ. ಉಡುಗೊರೆ ಕೊಡುತ್ತಿದ್ದ. ಎರಡನೆಯದಕ್ಕೆ ತಪ್ಪಿಸಿಕೊಳ್ಳುತ್ತಿದ್ದ.
ವಸಂತಕುಮಾರ್ ಕಲ್ಯಾಣಿ ಬರೆದ ಪ್ರಬಂಧ “ಮುಯ್ಯಿಗೆ ಮುಯ್ಯಿ…!”
ಹುತ್ತಗಟ್ಟಿದ ನಾಗಪ್ಪನ ಕತೆ: ಸುಮಾ ಸತೀಶ್ ಬರಹ
ಮ್ಯಾಲೆ ಆಕಾಸ್ದಾಗೆ ಸಿವ ಪಾರೋತಿ ಸಂಚಾರ ಹೊಂಟಿದ್ರು. ಪಾರೋತಿಗೆ ಯಾರೋ ಅಳೋ ಸದ್ದು ಕೇಳ್ತೋ. ಗಂಡಂಗೆ ಯಾರೋ ಹೆಣ್ಣು ಮಗು ಅಳೋ ಸದ್ದು ಬರ್ತಾ ಐತೆ. ಹೋಗಿ ನೋಡೋಮಾಂತ ಬೋ ಹಠ ಮಾಡಿದ್ಲು. ಸಿವ ಇದ್ದೋನೇ, ಥೋ ಈ ಹೆಣ್ಣುಮಕ್ಕಳ ಕಾಟ ಇದ್ದಿದ್ದೇಯಾ, ನೆಮ್ದಿಯಾಗಿ ಸಂಚಾರ ಹೋಗೋಕೂ ಬಿಡಾಕಿಲ್ಲಾ ಅಂಬ್ತ ಯೋಳಿ, ಆ ತಂಗಿ ತಾವ್ಕೆ ಕರ್ಕೊಂಡು ಬಂದ.
ಸುಮಾ ಸತೀಶ್ ಬರಹ ನಿಮ್ಮ ಓದಿಗೆ
ಸ್ಮಾರ್ಟ್ ಫೋನ್ – ಸ್ಮಾರ್ಟ್ ಸುರಕ್ಷೆ: ಡಾ. ಪ್ರಮೋದ್ ದಾಮ್ಲೆ ಬರಹ
ಈಗಿನ ಬಹುತೇಕ ಜನರ ಜೀವನದ ಭಾಗವೇ ಆಗಿಹೋಗಿರುವ ಸ್ಮಾರ್ಟ್ಫೋನ್ನಲ್ಲಿ ಅಡಗಿಸಿಟ್ಟ ನಮ್ಮ ವೈಯಕ್ತಿಯ ವಿವರಗಳು ಸೋರಿಕೆಯಾಗುವುದುಸಾಮಾನ್ಯವಾಗುತ್ತಿರುವ ಹೊತ್ತಿನಲ್ಲಿ, ಹೇಗೆ ಇಂಥ ಅಪಾಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತು ಡಾ. ಪ್ರಮೋದ್ ದಾಮ್ಲೆ ಬರಹ
ತುಂಬಿದ ಅಣೆಕಟ್ಟೆಯ ಸುತ್ತ-ಮುತ್ತ: ಗೊರೂರು ಶಿವೇಶ್ ಪ್ರಬಂಧ
ಅಣೆಕಟ್ಟಿನಿಂದಾಗಿ ನಮ್ಮೂರಿಗೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಾದರಿ ಗ್ರಾಮವಾಗಿದ್ದ ಊರು ಈಗ ಶೀತಪೀಡಿತ ಪ್ರದೇಶವಾಗಿದೆ. ಅಸ್ತಮಾ ಪೀಡಿತರ ಜೊತೆಗೆ ಮಲೇರಿಯಾ ಡೆಂಗಿ ಕಾಯಿಲೆಗಳು ಆಗಾಗ ಕಾಡುತ್ತಿರುತ್ತವೆ. ಕೆಲವು ವರ್ಷಗಳ ಹಿಂದೆ ಹಳೆಯ ಊರನ್ನು ಕೂಡ ಮುಳುಗಡೆ ವ್ಯಾಪ್ತಿಗೆ ತರಲಾಗಿದೆ.
ಗೊರೂರು ಶಿವೇಶ್ ಬರೆದ ಪ್ರಬಂಧ ನಿಮ್ಮ ಓದಿಗೆ