Advertisement
ಅಕ್ಷಯ ಕಾಂತಬೈಲು  ಬರೆದ ಈ ದಿನದ ಕವಿತೆ

ಅಕ್ಷಯ ಕಾಂತಬೈಲು ಬರೆದ ಈ ದಿನದ ಕವಿತೆ

ಮಾಂಸ ಮತ್ತು ಸಸ್ಯ

ಸಾಬ್ರ ಪೊಗದಸ್ತಾದ ಮೇಕೆ;
ತೋಟದ ಬೇಲಿ
ಹಾಯ್ದು
ಭಟ್ರು ಬೆಳೆದ
ಸೊಂಪಾದ ತರಕಾರಿ ಬೆಳೆ
ಅದರ ಬಾಯಿಗೆ ಗುಳುಂ

ಹೀಗೇ
ನಾನು
ಬೋಟಿ ತಿಂದದ್ದು
ಇನ್ನೂ ಕರಗಿಲ್ಲ
ಅದು ಯದ್ವಾತದ್ವಾ
ಸಿಕ್ಕುಗಟ್ಟಿತ್ತು

ಹಾಗೇ
ನಾನು
ನಯವಾಗಿ
ಎಳೆಎಳೆ ಬಿಡಿಸುತ್ತಾ
ಕರುಳನ್ನು
ನೆಲದಲ್ಲಿ ನೆಡುತ್ತಿದ್ದೇನೆ
ಎಲೆ ಚಿಗುರಬಹುದು

ಮಗ ಮತ್ತೆ ಬರುತ್ತಿದ್ದಾನೆ
ಕಡಲಿನ ಜಲರಾಶಿಗಿಂತ
ಒಂದು ಹನಿ ಹೆಚ್ಚಾಗಿಯೆ
ನಿನ್ನ ಮಡಿಲಲಿ ತಲೆಯಿಟ್ಟು
ಭೋರ್ಗರೆಯುವ ದನಿಯಿಂದ
ಹೊಕ್ಕುಳಿನ ಆಳದಿಂದ
ಅತ್ತುಬಿಡಲು ಓಡಿ
ಬರುತ್ತಿರುವೆ….

ಪೇಟೆಗೆ ಹೋಗುವ, ಊರಿಗೆ
ಬರುವ ಗಡಿಬಿಡಿ ಜನರೇ
ನನಗೆ ತುಂಬಾ ಅರ್ಜೆಂಟಿದೆ
ಅವಳ ನೋಡಲು ದಯವಿಟ್ಟು
ದಾರಿಬಿಡಿ…

ತಪ್ಪಾಯಿತು ಅಮ್ಮ
ಊಟ ಸಪ್ಪೆಯೆಂದು
ತಟ್ಟೇಲಿ ತಂಗಳು ಬಿಟ್ಟು
ಓಡಿ ಹೋದವನ
ಬೆನ್ನೂ ಹೊಟ್ಟೆ ಈಗ
ಒಂದೇ ಆಗಿದೆ!
ತುತ್ತಿಗು ಮುತ್ತಿಗೂ
ಬಹಳ ಸೆಳೆತಗೊಂಡು
ಬರುತ್ತಿರುವೆ…

ನೇರವಾಗಿ ಈ ಸಣಕಲು
ಮೈಗೆ ಸ್ಪರ್ಶ ಅಮುಕಲು
ನಿನ್ನ ಅಸ್ತಿತ್ವದಲ್ಲಿ ಬಟ್ಟೆಗೂ
ಬೆಲೆಯಿಲ್ಲದೆ ಪಾದ ಒತ್ತುವ
ತುಂಡರಿವೆ ಆಶೆ ಹೊಂದಿರುವೆ
ತೋಳ ತೆಕ್ಕೆಯಲಿ
ಮತ್ತು ನಿನ್ನ ಮುದ್ದಿನಲಿ
ಹೊರಳಲು ಸಿದ್ಧನಾಗಿಯೆ
ಬರುತ್ತಿರುವೆ…

ಅಕ್ಷಯ ಕಾಂತಬೈಲು ತರುಣ ಕವಿ.
ಎಂಜಿನಿಯರಿಂಗ್ ಪದವಿಯ ನಂತರ ಅಪ್ಪನಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿರುವವರು.
ಸಾಹಿತ್ಯ, ಕೃಷಿ ಇಷ್ಟದ ವಿಷಯಗಳು.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ