Advertisement
ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

ಕಲ್ಲಿನ ಮೂರ್ತಿಯ ಸುತ್ತ

ಓ ಕಲ್ಲೇ
ನಿನ್ನ ಮೈ ಮೇಲೆ
ಒಂದೇ ಸಮನೆ
ಉಳಿಯೇಟು ಕೊಡುವಾಗಲೂ
ಸುಮ್ಮನಿದ್ದೆ;
ರೆಪ್ಪೆಗಳು
ಬಡಿಯದ ಕಣ್ಣುಗಳು
ಅಂತರಾಳದ
ನೋವುಗಳ ಉಣ್ಣುತ್ತಲೇ ಇದ್ದೆ;
ಉಸಿರಾಡದ
ವಾಸನೆ ಹಿಡಿಯದ ಮೂಗು
ಅನುಭಾವದ
ಕಿಡಿಗಳನ್ನು ತೂರುತ್ತಿದ್ದೆ;
ಮಾತನಾಡದ ಬಾಯಿ
ಹುಣ್ಣಾಗಿದ್ದರೂ
ಮೌನದ ಕುಲುಮೆಗೆ
ದನಿಯನ್ನು ಒಟ್ಟಿದ್ದೆ;
ಕೇಳದ ಕಿವಿಯನ್ನು
ಧರಿಸಿದರೂ
ನೆತ್ತರ ಚರಿತ್ರೆಯನ್ನು
ಬಿತ್ತಿದ್ದೆ;
ಈಗಲೂ ಗಢದ್ದು ನಿದ್ದೆ??

ಬಂದವರೆಲ್ಲ ತಲೆಸವರಿ
ಅಂಗೈ ತುರಿಕೆ
ತೀರಿಸಿಕೊಂಡು
ಹೊರಟುಬಿಡುತ್ತಾರೆ;
ತಲೆಯ ಮೇಲೆ
ಸತ್ತ ಮತ್ಸ್ಯದ ಶವ
ಕೇಶವಾಗಿ ಸಿಂಗರಿಸಿದೆ

ಬಿಸಿಲು,
ಮಳೆ,
ಚಳಿಗಾಲದ
ಗುರುತು ಪರಿಚಯವೇ ಇಲ್ಲ;
ಮರೆವು-ನೆನಪುಗಳ ಹಂಗೂ ಇಲ್ಲ
ದುರಂತವೆಂದರೆ
ಮೈಥುನದ ಅಂಗಗಳನ್ನೂ ಕೆತ್ತಲಾಗಿಲ್ಲ
ರಾತ್ರಿಯದ್ದಾಗಲಿ ಹಗಲಿನದ್ದಾಗಲಿ
ಕಲ್ಪನೆಯ ಸಣ್ಣ ಬಲೆಯನ್ನೂ ಹೆಣೆಯುವಂತಿಲ್ಲ
ಇಲ್ಲಿ
‘ಶಿಲ್ಪಿ’ ಕನಸುಗಳಿಗೂ
ಮುಳ್ಳಿನ ಬೇಲಿ ನೆಟ್ಟಿದ್ದಾನೆ

ಮೂರ್ತಿ ಹರಾಜಿಗಿಟ್ಟಿಲ್ಲ
ತಲೆಯ ಮೇಲೆ ಕೂತ
ಹಸಿದ ಹದ್ದು
ಮೀನನ್ನು ಒಂದೇ ಸಮನೆ
ಕುಟುಕಿ ಕುಟುಕೀ
ಸುಸ್ತಾಗಿದೆ,
ಹಾರಲೇಬೇಕು
ಬಹು ಎತ್ತರಕ್ಕೆ
ರಕ್ತ ಮಾಂಸದ ಹಸಿ ಚೂರಿಗೆ…!

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ