Advertisement
ಅಭಿಷೇಕ ಬಳೆ ಮಸರಕಲ್ ಬರೆದ ಗಜ಼ಲ್

ಅಭಿಷೇಕ ಬಳೆ ಮಸರಕಲ್ ಬರೆದ ಗಜ಼ಲ್

ಪ್ರಣಯದ ಎಳೆಗಳಿಂದ ವಿರಹವನ್ನೆಲ್ಲ ಕೂಡಿಸಿ ಹೆಣೆದು ಬಿಡು ಸಖಿ
ನಿನ್ನಧರದಿಂದ ಮದಿರೆಯ ನಶೆಯನ್ನೆಲ್ಲ ನನ್ನೆದುರು ಕುಡಿದು ಬಿಡು ಸಖಿ

ಸಂಜೆಯ ತಂಗಾಳಿಗೆ ಏನು ಗೊತ್ತು ನಿನ್ನ ಮೈ ಮನದ ಹಿತವಾದ ಸುಖ
ಗಾಳಿ ತಂಗಾಳಿಯನೆಲ್ಲ ಬಾಹು ಬಂಧನದಿ ಬಯಲೊಳಗೆ ಸಳೆದುಬಿಡು ಸಖಿ

ಮಾಗಿ ಚಳಿಗೆ ಬೆಚ್ಚಗಿನ ಹೊದಿಕೆ ನೀ ನನಗಾಗಿರಲು ನಡುಕ ನನಗೇಕೆ
ಬಿಸ್ತಾರದಿ ಪ್ರೇಮದ ರಸಧಾರೆ ಸ್ಖಲಿಸುವಂತೆ ಮಣಿದು ದಣಿದು ಬಿಡು ಸಖಿ

ಮನದ ರಂಗಸಜ್ಜಿಕೆ ಮೇಲೆ ಅಭೂತಪೂರ್ವ ಕಲ್ಪನೆಗೆ ನೂರು ಭಾವ ಬಣ್ಣ
ಮಂದಿರ ಮಸೀದಿ ನಾದ ಒಂದಾಗುವಂತೆ ಧರ್ಮ ಧಿಕ್ಕರಿಸಿ ಕುಣಿದು ಬಿಡು ಸಖಿ

ಗಂಡು ಹೆಣ್ಣೆಂಬುದು ಅನಾದಿ ಕಾಲದ ಸೃಷ್ಟಿಯ ಕಣ್ಣೊಳಗಿನ ಸೊಬಗಿದು
ಮಾಗಿದ ಅಭಿಯ ಮೈಗೆ ಮೌನವಾಗಿ ಮಣಿದು ಸೇರಿಬಿಡು ಸಖಿ

 

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ