Advertisement
ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

 

ಮಳೆಯಲ್ಲಿ ಒದ್ದೆಯಾಗಿರುವ ಹೂವು
ನೆನಪಿಸುತ್ತಿದೆ ರಾತ್ರಿಯ
ನಕ್ಷತ್ರಗಳು ನಿನ್ನ ಕಣ್ಣುಗಳಲ್ಲಿ
ಬಂದು ಹೋಗುತ್ತಿದ್ದವು
ಬೆನ್ನ ಮಣಿ ಕಟ್ಟನ ಬದುವಿನಂಚಿನಿಂದ
ಬಿದ್ದ ಸುಖದಲ್ಲಿ
ಅವೂ ಭಾಗಿ
ನೆಲವನ್ನು ನಭವನ್ನು
ಬೆಸೆದು

******

ನಿನ್ನ ಕಣ್ಣ ಬೆಳಕಲ್ಲಿ
ಲೋಕದ ಆತ್ಮ ವಂಚನೆಗಳು
ಸೆರೆಯಾಗಿ
ತಪ್ಪಿಸಿಕೊಳ್ಳದೆ ಒದ್ದಾಡುತ್ತಿವೆ

******

ಸಿಗಬೇಕಾದ್ದು ಸಿಕ್ಕಾಗ ಸಿಗಬೇಕಾದಂತಿರಲಿಲ್ಲ
ಸಿಗದಿದ್ದುದು ಸುಳಿದು
ಲೋಕದ ಆಕರ್ಷಣೆಯಲ್ಲಿ
ಆಸೆಯ ಸಂಚು
ದುಃಖ ನಿರಂತರ
ಸೃಷ್ಟಿಯ ನಿಯಮ

******

ನಿನ್ನ ಎಳೆಗರುಕೆಯಂಥ
ಬೆರಳುಗಳು
ಮೈಯ ಮೇಲೆ
ತಂಗಾಳಿಯ ಹರಿಸುವುದ
ತಿರಸ್ಕರಿಸಿ
ಒಳ್ಳೆಯವನೆನಿಸಿಕೊಳ್ಳಲಾರೆ

******

ಯುದ್ಧದಲ್ಲಿ ತಲ್ಲೀನನಾಗಿರುವ ದೊರೆಯೇ
ಒಂದೇ ಒಂದು ಕವಿತೆಯಿದೆ
ಕೇಳಿಸಿಕೋ
ನಿನ್ನಾಜ್ಞೆ ಅವರನ್ನು ಸೀಳಿ ಚಲ್ಲನೆ ನೆತ್ತರು ಚಿಮ್ಮುವುದಕ್ಕೂ ಮುನ್ನ
ಮೆಲ್ಲನೆ ಪಿಸುನುಡಿವೆ ಸೋನೆಯಂತೆ ಸೃಷ್ಟಿಯ ಚೆಲುವೆಲ್ಲ ಕರಗಿರುವಂತಹವಳಿಂದ
ಸ್ಫೂರ್ತಿಗೊಂಡಂತ ಕವಿತೆ
ಕಂಗೊಳಿಸುತ್ತ ಮನಸೂರೆ ಗೊಳ್ಳುವ ಅವರಿಂದ ಚಿಮ್ಮುವ ನೆತ್ತರ ಬಣ್ಣದ ಹೂವಿನಂತಹ ಕವಿತೆ
ಕೇಳಿಸಿಕೋ ದೊರೆಯೇ ಯುದ್ಧಕ್ಕೂ ಮುನ್ನ

******

ಮಾತಿನ ಬಿರುಗಾಳಿ ಮಳೆಯಲ್ಲಿ ಒದ್ದೆಯಾದ ಹೂವಿನಂತಿರುವ ಮೌನವ ಕಂಡು
ಹಾಗೆ ನೆಲದಲ್ಲಿ ಕರಗಿಹೋಗುವುದು
ಸೋಲೂ ಅಲ್ಲ ಗೆಲುವೂ ಅಲ್ಲ

******

ಕೊನೆಗೂ ನೀನು
ದಕ್ಕಿದ್ದು ಬೊಗಸೆಯಷ್ಟು
ಆದರೆ ಅದರೊಳಗೆ
ಕಡಲು

******

ತೊಯ್ದಿದೆ ಹೂವು ಮಳೆಯಲ್ಲಿ ಅರಳಿ
ಕೇವಲ ಹೂವಷ್ಟೇ ಅಲ್ಲ
ಅಂದರೆ
ನಿನ್ನ ಕೆನ್ನೆಯಲಿ ಮೂಡಿ ಕಾಮನಬಿಲ್ಲು
ಕರಗಿ
ನಾಚಿಕೆಯ
ಜಿನುಗು

******

ಲೋಕದ ಕಣ್ಣಿಗೆ ಏಕಾಂಗಿ
ಆದರೆ ಎದೆಯಲ್ಲಿ ನಿನ್ನ
ನೆನಪುಗಳು
ಚಿಟ್ಟೆಗಳು
ಆಕಾಶವ ಆವರಿಸಿದೆ
ಮೋಡಗಳಾಗಿ
ಮಳೆ
ನನ್ನೊಳಗೆ ಈ ಪರಿ ತುಂಬಿರುವಾಗ
ನೀನು
ಏಕಾಂತದ ಮಾತೆಲ್ಲಿ

 

(ಕಲಾಕೃತಿ: ರೂಪಶ್ರೀ ಕಲ್ಲಿಗನೂರ್)

About The Author

ಎಚ್ ಆರ್ ರಮೇಶ್

ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ