Advertisement
ಎಚ್. ವಿ. ಶ್ರೀನಿಧಿ ಬರೆದ ಈ ದಿನದ ಕವಿತೆ

ಎಚ್. ವಿ. ಶ್ರೀನಿಧಿ ಬರೆದ ಈ ದಿನದ ಕವಿತೆ

ಅಜ್ಜ

ನಿನ್ನ ನೋಡಿದ ನೆನಪಿಲ್ಲ ನನಗೆ,
ಅವರಿವರು ಹೇಳಿದ ಮಾತುಗಳಲ್ಲೇ
ಕಟ್ಟಿಕೊಂಡಿದ್ದೇನೆ ನಿನ್ನದೊಂದು ಚಿತ್ರ.

ನೀನು ದುಷ್ಟನಂತೆ, ನಿಷ್ಟನಂತೆ
ಬುದ್ಧಿವಂತನಂತೆ, ಆದರೂ ಅಪ್ರಯೋಜಕನಂತೆ.
ಮನೆಗೆ ಮಾರಿ ಊರಿಗೆ ಉಪಕಾರಿಯಂತೆ
ಆದರೂ ಒಳ್ಳೆಯ ಮನುಷ್ಯನಂತೆ.

ಎಲೆಯುದುರಿ, ಮೈ ಬಾಗಿ, ಕೊನೆಗೆ
ಬಿದ್ದು ಹೋದ ಮರ ನೀನು,
ಆರೋಪಗಳ ಸುರಿಮಳೆ ನಿನ್ನ ಮೇಲೆ.
ಆದರೂ ಮರೆತಿಲ್ಲ, ಒಂದು ಕಾಲಕ್ಕೆ
ನೀನಿತ್ತ ತಂಪು ನೆರಳು, ನಿಷ್ಕಾಮ ಪ್ರೇಮ.

ಒಡಕಲು ಬಿಂಬಗಳಲ್ಲೆ ನಿನ್ನ
ಬೆಳಕು ಹುಡುಕುವೆ ಅಜ್ಜ,
ನೀನಿದ್ದರೆ ಮೊಮ್ಮಕ್ಕಳ ಪರ ನಿಂತು
ಬೈಯ್ಯುತ್ತಿದ್ದೆಯೇನೊ ನಿನ್ನ ಮಕ್ಕಳಿಗೆ.

ನಿನ್ನ ಮಕ್ಕಳು ಬೈಯ್ಯುತ್ತಲೇ
ನಿನ್ನ ನೆನೆಯುತ್ತಾರೆ
ಕಣ್ಣಂಚಿನ ನೀರ ಒರೆಸುತ್ತಾರೆ.
ಲೌಕಿಕದ ಅಗತ್ಯಗಳ ಮೀರಿ
ನೀನು ಕಲಿಸಿದ ಮೌಲ್ಯಗಳೆ ಸಾಕೆನ್ನುತ್ತಾರೆ.

ಕೊನೆಗೂ ನೀ ನನಗೆ
ಬಿಡಿಸಲಾಗದ ಒಗಟು
ನಿಲುಕದ ಧ್ರುವತಾರೆ.
ನಿನ್ನ ಗೈರುಹಾಜರಿಯೆ
ತಂದಿದೆ ನೆನಪಿಗೊಂದು ಘನತೆ.

 

ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

4 Comments

  1. ಅಪೂರ್ವ

    ಅದ್ಬುತ ಬರವಣಿಗೆ, ನಾನು ನಿಮ್ಮ ಅಭಿಮಾನಿ, ನಿಮ್ಮ ಮುಂದಿನ ಬರವಣಿಗೆಗಾಗಿ ಸದಾ ಕಾಯುವೆ. ❤️

    Reply
  2. ಶ್ರೀನಿಧಿ ಎಚ್ ವಿ

    Thank you so much

    Reply
  3. Jayasrinivasa rao

    What a lovely poem!!

    Reply
    • ಶ್ರೀನಿಧಿ ಎಚ್ ವಿ

      Thank you so much

      Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ