Advertisement
ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಬರೆದ ಈ ದಿನದ ಕವಿತೆ

ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಬರೆದ ಈ ದಿನದ ಕವಿತೆ

ನಮ್ಮೂರ ಬಿಸಿಲು

ರಣ ಬಿಸಿಲಿಗೆ
ನನ್ನವ್ವ, ಮುಂಗಾರು ಮಳೆ‌ ಹೊಯ್ಯುವ
ನೀರಿಕ್ಷೆ ಇಟ್ಟು
ಬೇಸಾಯದ ಹಗ್ಗ, ಮಿಣಿ ಹೊಸೆಯುವ
ತಿರುಗಣಿ ಕಾಯಕದಲ್ಲಿ ನಿಲ್ಲಿಸಿದಾಗ
ಬಿಸಿಲ ಝಳ ತೆರೆ ತೆರೆಯಾಗಿ ಸುರಿಯುತ್ತಿತ್ತು.

ತಂಪಿಗಾಗಿ;
ಮಜ್ಜಿಗೆ, ನಿಂಬೆ ಪಾನಕ
ಚಿನಕುರಳಿ ಕಾಳು
ಮನೆಯ ಮುಂದೆ ತೆಂಗಿನ ಗರಿಯ
ಚಪ್ಪರ ಹೊಸದಾಗಿ ಹೆಣೆದು ನಿಲ್ಲುತ್ತಿತ್ತು.

ಯುಗಾದಿಯೂ ಬಂದು
ಗೋಡೆಗಳು ಹಾಲಿನ ಬಿಳುಪಿನಿಂದ
ಹೊಳೆಯುತ್ತಿದ್ದವು ಮಧ್ಯೆ ಜಾಜಿಯ ಗೆರೆ
ಬೇವಿನ ಹೂ ಘಮ, ಹಣ್ಣಿನ
ಅಂಟು ಅಂಟಾದ ರಸಕ್ಕೆ
ಮನೆ ತುಂಬಾ ನೊಣಗಳ ಗುಂಪಿನ ರಾಶಿ

ಬಿತ್ತನೆ ಬೀಜದ ಕಾಳು
ಸುಲಿದು ಅಸನು ಮಾಡುವ ಕಾಯಕದಲ್ಲಿ ಸೋಬಾನೆ ಪದ,
ಗಮಕಗಳ ನುಡಿ ನಡು ರಾತ್ರಿವರೆಗೂ ಪುರಾಣದ ಪಾರಾಯಣ
ಬಸವನ ಗುಡಿ ಮುಂದೆ ಸಾಗುತ್ತಲೇ ಇತ್ತು.

ಮದುವೆ ಸಂಭ್ರಮಗಳ ಸಾಲು
ಊರ ಆ ಬೀದಿ ಈ ಬೀದಿಯಲಿ
ಚಪ್ಪರ ತೋರಣ,
ಮೇಳದ ತುತ್ತೂರಿ
ಲಾಡು ತಿನ್ನುವ ಸಡಗರದ ಸಂಭ್ರಮ.

ಚಿನ್ನಿದಾಂಡು, ಚೌಕಾಬಾರ
ಕುಂಟಾಬಿಲ್ಲೆ, ಗೋಲಿ
ಆಟಗಳೊಳಗೆ ಹುದುಗಿದ ನಮ್ಮನ್ನು
ಅಮ್ಮ, ಹುಡುಕಿ ತರುವ ಪತ್ತೆದಾರಿಕೆಗೆ
ಸಿಕ್ಕು ಕಿವಿ ಹಿಂಡಿಸಿಕೊಳ್ಳುವಲ್ಲಿ
ಬೆಚ್ಚಗಿನ ಪ್ರೀತಿ ಒಳಗೊಳಗೇ ಕೆಂಪಾಡುತ್ತಿತ್ತು.

ಬಿಸಿಲು, ಅದೆಷ್ಟೊಂದು ಸೆಖೆ
ಅನಿಸದೇ,
ನೆಲ ಮಿದುವಿಗಾಗಿ ಮಳೆ ಕಾದು
ಬೆಳೆ ಬೆಳೆದುಕೊಳ್ಳುವ ಆಶಾಗೋಪುರ
ಮನೆ ಮನಗಳಲ್ಲೂ ತುಂಬಿ ತುಳುಕುತ್ತಿತ್ತು.
ಬಿಸಿಲು ಬೆವರ ಆಯಾಸವನ್ನು
ಕಳೆದುಕೊಳ್ಳುವ ಬಿಡುವಿನ ಸಂಧಿ ಕಾಲ.

 

ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ವಾಸವಾಗಿದ್ದಾರೆ.
ತಾ.ಪಂ ಕಚೇರಿ, ಹಿರಿಯೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಂಪಿಯ ಕನ್ನಡ ವಿ.ವಿ.ಯಲ್ಲಿ ಪಿ.ಹೆಚ್ ಡಿ ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ನಾಗೇಶ ಕೆ ಓ

    ತುಂಬಾ ಚೆನ್ನಾಗಿದೆ… ಅಭಿನಂದನೆಗಳು

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ