Advertisement
ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

ತೊಟ್ಟಿಲು ತೂಗುವ ಮಳೆಹನಿ

ಹೂವಿನ ಕಣಜದಲಿ ನಾಗರದ ಹೆಡೆ ತೂಗುವಾಗ
ಅಳುವ ತುಟಿಗಳಲಿ ನಿತ್ಯದ ಸತ್ವ ರುಚಿಸುವುದಿಲ್ಲ
ಅವಳು ಸೆರಗ ಹಾಸಿದ ಪರಿಗೆ
ಸಮುದ್ರವೂ ಚಿರ ನಿದ್ರೆಗೆ ಸರಿಯುವ ಸಮಯ

ಸಾಲು ಚೈತ್ರದ ನೆರಳಡಿ ರೆಕ್ಕೆ ಬೀಸುವ ಅವಳುಡಿಯಲಿ
ಇರುಳು ತಲೆದಿಂಬಿನ ಪರದೆಯಲಿ ಅವಿತುಗೊಂಡಿತು
ನಿತ್ಯ ಗೋರಿ ಕಟ್ಟುವವರ ಸರದಿಗಾಗಿ

ತೆನೆಗಳ ರಾಶಿಯಾಗಬೇಕಾದ ನೆಲದ ಹುಡಿಯಲಿ
ಮಣ್ಣಿನ ಹೆಂಟೆಗಳು ಬಾಂಬಿನ ತೆಕ್ಕೆಯಲಿ ಅವಿತಂತೆ
ಬೆಳಕಿನ ಪದರು ಚೀರಿತು ಓಜೋನ ಚಹರೆಗೆ ನಲುಗಿ

ಈಗವಳು ಕೂದಲೆಳೆಯ ಬೆಳಕಿನ ಗುಂಗಲಿ
ತಲೆತುಂಬ ಮಲ್ಲಿ ಹೂ ಮುಡಿವ ಆಕಾಶದಂತವಳು
ಅಂಗಾಲು ನೆಕ್ಕಿ ಕಾಲ್ಗೆಜ್ಜೆಯಲಿ ಸುತ್ತು ಹೊಡೆವ
ಹಸಿಮಣ್ಣಿನ ಕಣ್ಣಿನವಳು

ದಾರಿಯ ಇಕ್ಕೆಲಗಳಲಿ ಸಾಲು ನೆರಳುಗಳ ದಾಟಿ
ಮೋಡದ ನೆರಿಗೆಯಲಿ ಮಿಂಚಿನ ಗರಿಬಿಚ್ಚಿ
ಮಳೆಹನಿಗಳ ಜೊತೆಗೂಡಿ ಬಿರಿದ ನೆಲದ
ಕೊರಳಲಿ ಹಸಿರು ತೊಟ್ಟಿಲು ತೂಗುವಳು

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ