Advertisement
ಕಿರಸೂರ ಗಿರಿಯಪ್ಪ ಬರೆದ ಹೊಸ ಗಝಲ್

ಕಿರಸೂರ ಗಿರಿಯಪ್ಪ ಬರೆದ ಹೊಸ ಗಝಲ್

ಹೆಗಲು ತೂಗುವ ನಕ್ಪತ್ರ

ಬತ್ತಿದ ಬೆವರು ತೂಗುವ ನಕ್ಷತ್ರದ ನಗು ನನ್ನೊಳಗೆ ಶಾಶ್ವತ
ಒಲೆಯೂದಿ ಕಣ್ಣುಗಳ ತಿಕ್ಕುವ ಅವಳ ಕೆನ್ನೆಗೆ ಬಹಳ ಹಿತ

ಹಾಸಿಗೆಯ ಸುರುಳಿಗೆ ಕಚಕುಳಿ ಇಕ್ಕುವ ನಕ್ಷತ್ರದ ನೋಟ
ಬಳಲಿ ಬಾಯಾರಿದ ತುಟಿಗಳ ತೆಕ್ಕೆಗೆ ಯಾವಾಗಲೂ ಶಾಂತ

ಮುರಿದ ಟೊಂಗೆಯಲಿ ನೇತಾಡುವ ಅವಳ ಚಿಗುರುಗಳು
ನಕ್ಷತ್ರದ ಜೋಳಿಗೆಯಾಗಿ ಹೆಗಲು ಕಾಯುವ ಶಾಂತಿದೂತ

ಕನಸುಗಳ ಕನವರಿಕೆಯಲಿ ಒಂಟಿಯಾದ ಏಕಾಂತಕೆ
ಮುಂಗೈ ಚಾಚಿದ ನಕ್ಷತ್ರಗಳು ಉಯ್ಯಾಲೆ ತೂಗುವ ಚಿತ್ತ

ಕಾಡೊಳಗೆ ಹೊಕ್ಕು ಜೀವ ತೇಯುವ ಅಲೆಮಾರಿ ನಕ್ಷತ್ರಗಳು
ಹೆಗಲು ನಾಡಿಗೆ ಮುಕ್ಕಿದ ಸುಕ್ಕುಗಳ ಮುಕ್ಕುವ ಅವಧೂತ

ಅಲೆಗಳಿಗೂ ಮಿಗಿಲಾಗಿ ಕೊರಳು ಕಾಯೊ ನಕ್ಷತ್ರಗಳು
ಚದುರಿದ ದೀಪಗಳ ನಿಟ್ಟುಸಿರಿಗೆ ಅನುಗಾಲದ ಅಮೃತ

ಗವ್ವೆನ್ನುವ ರಾತ್ರಿಯ ತಿಕ್ಕಲುಗಳ ಮೆಟ್ಟಿ ನಿಂತ ನಕ್ಷತ್ರಗಳು
ಒಂಟಿ ತೆಕ್ಕೆಗೆ ಜೋಗುಳವಾಗಿ ಹರಡಿಕೊಂಡವು ಸುತ್ತಮುತ್ತ

ನಕ್ಷತ್ರದ ನಕಾಶೆಯಲ್ಲಿ ಅವಿತ ಕಿರಸೂರ ಕನಸುಗಳು
ಎಲ್ಲೆಗೂ ಮಿಗಿಲಾಗಿ ಸಹಚರತೆ ಕಟ್ಟುವ ದಿಟ್ಟ ನೋಟದತ್ತ

 

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Deepthi

    Ollheya gazal

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ