Advertisement
ಕೆ.ಎಂ ವಸುಂಧರಾ  ಬರೆದ ಈ ದಿನದ ಕವಿತೆ

ಕೆ.ಎಂ ವಸುಂಧರಾ ಬರೆದ ಈ ದಿನದ ಕವಿತೆ

ಹುಡುಕಾಟಗಳು ನಿಂತಿಲ್ಲ

ತುಮುಲದ ಅಲೆ ದಡ ಮುಟ್ಟಿ
ತಣಿದು, ಹಿಂದೆ ಸರಿವ
ಅಲೆಯೊಡನೆ ಬೆರೆತು ನಾ
ಹುಡುಕಾಟದ ಸುಳಿಯಲಿ
ಸುತ್ತುತ್ತಾ ಆಳಕ್ಕಿಳಿದಿರುತ್ತೇನೆ.

ಆ ಸ್ವಚ್ಛ ನೀಲಿ ಆಗಸ ದಟ್ಟಮಳೆ
ಸುರಿದು, ಬೆಟ್ಟಸಾಲು ತಣಿಸಿ,
ಇಳೆ ಎದೆಯಲಿ ಹಸಿಯೊಲವು
ಬಿತ್ತಿದ ನೆನಪುಗಳಿಗಾಗಿ ಹುಡುಕುತ್ತಾ..

ಕುಡಿಯೊಡೆದ ಬೀಜ; ಹಸಿರಾಗಿ
ನಳನಳಿಸಿ, ಮೊಗ್ಗು – ಹೂವಾಗಿ-
ಕಾಯಾಗಿ; ಬಿಳಿ-ಹಳದಿ- ಕೆಂಪು..
ರೂಪಾಂತರಿಸುವ ಸೋಜಿಗವ
ಹುಡುಕುತ್ತಾ…

ನಮ್ಮಾಸೆ ಒಂದಾಗಿ, ನಲುಮೆ
ಮಗುವಾಗಿ ನಗುವಾಗಿ ನಲಿದಾಟದ
ಸಂಭ್ರಮದ ಹೊತ್ತಿನಲಿ ‘ಅರೆ
ಎಲ್ಲಿತ್ತಿದೆಲ್ಲಾ!’ ಎಂದು ಹುಡುಕುತ್ತಾ..

ನಿರಂತರದ ದುಡಿಮೆ ನಡುವೆ
ವಿಶ್ರಾಂತಿ ಬಯಸಿ ಜೀವ;
ಥಟ್ಟನೆದ್ದು ಮರೆಯಾದಾಗ, ಎತ್ತ
ಸಾಗಿತೆಂಬ ದಿಗ್ಭ್ರಮೆಯ ಅನಂತದಲಿ
ಜೀವ ಚೈತನ್ಯವನು ಅರಸುತ್ತಾ…

ಈ ಯಾವ ಹುಡುಕಾಟಗಳೂ
ಇನ್ನೂ ನಿಂತಿಲ್ಲ…

ಮಂಡ್ಯ ಮೂಲದ ಕೆ.ಎಂ ವಸುಂಧರಾ ಬೆಂಗಳೂರು ವಾಸಿ.
ಕರ್ನಾಟಕ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮರೆತು ಬಿಟ್ಟದ್ದು’ ಇವರ ಪ್ರಕಟಿತ ಕವನ ಸಂಕಲನ.
ಬರವಣಿಗೆ,ಓದು, ಪ್ರವಾಸ, ಚಾರಣ ಇವರ ಹವ್ಯಾಸಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. VASUNDHARA

    ಧನ್ಯವಾದಗಳು ಕೆಂಡಸಂಪಿಗೆ

    Reply
  2. RaJANI g C

    ಭಾವದಲೆಗಳ ಹುಡುಕಾಟ ತೀರದ ಭಾವಯಾನ…ಸುಂದರ ಕವನ ವಸುಂಧರ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ