Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಮೌನ ಬಿತ್ತ ಬಯಲು

ಅವನೆಂದ: ನಾನು ನಿನ್ನ ಅದೆಷ್ಟು ಪ್ರೀತಿಸುತ್ತೇನೆ- ಎಂದರೆ,
ಕಡಲಷ್ಟು..ಮುಗಿಲಷ್ಟು..ಭೂಮಿಯಷ್ಟು!
ಆದರೆ, ಅವಳಿಗೆ ಗೊತ್ತು-
ತೆಕ್ಕೆಯೊಳಗೆ ಕಡಲು, ಮುಗಿಲು, ಭೂಮಿ
ಎಷ್ಟು-ದಕ್ಕಬಹುದೆಂದು.

ಅವನೆಂದ; ನಾನು ನಿನ್ನ ಅದೆಷ್ಟು ಪ್ರೀತಿಸುತ್ತೇನೆ- ಎಂದರೆ,
ನಿನ್ನಿಂದ ಅರೆಘಳಿಗೆ ಅಗಲಿರಲಾರೆ!
ಆದರೆ, ಅವಳಿಗೆ ಗೊತ್ತು-
ಪ್ರೀತಿಯ, ಅನುಭೂತಿಯ
ನೀತಿ, ನಿಯತಿ- ನಿಯತ್ತು.

ಅವನೆಂದ; ನನಗೆ ನೀನು ಅದೆಷ್ಟು ಅಗತ್ಯ- ಎಂದರೆ,
ಇತಿ-ಮಿತಿಯ ಅಗ್ನಿ, ನೀರು, ಗಾಳಿಯಂತೆ!
ಆದರೆ, ಅವಳಿಗೆ ಗೊತ್ತು-
ಭವದ- ಪರಿ-
ಭವದ ತಂಪು-ಬಿಸುಪಿನಸ್ಮಿತೆ!

ಅವನೆಂದ; ನಾನು ನಿನ್ನನ್ನು, ನೀನು ನನ್ನನ್ನು- ಅದೆಷ್ಟು
ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ!
ಆದರೆ, ಅವಳಿಗೆ ಗೊತ್ತು-
ಅವನಿಗೆ ಅವನ ಬಗೆಗೇ
ತಿಳಿದಿದ್ದಕ್ಕಿಂತ- ಹೆಚ್ಚು!

ಹಾಗೆ- ಕಡಲು, ಮುಗಿಲು, ಭೂಮಿಗಳೆಲ್ಲ
ತಮಗಿಂತ ಅರ್ಥವತ್ತಿನ
ನೆಲೆಯಲ್ಲಿ ಸಂಧಿಸಲು,
ಋತುಮಾನ- ಅಳೆಯುವ
ಸೂರ್ಯ-ಚಂದ್ರರ ಕೊಳಗಗಳೆಂಬ
ಉಸಿರು-ನಳಿಕೆಯಲ್ಲಿ ಬಂಧಿಸಲು,
ಮಾತಿನ ಬೀಜ ಬಿತ್ತ-…
ಮೌನದ ಬಯಲಾದವು..
ಗೀತಾ ಹೆಗಡೆ.

About The Author

ಗೀತಾ ಹೆಗಡೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ