Advertisement
ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ

ನಕ್ಷತ್ರ ಮತ್ತು ವೀಣೆ

ಆ ಸ್ವಪ್ನ
ಈ ಮುಂಜಾವು
ನಿನ್ನ ಅಧರಗಳ ಮೇಲೆ ಸುಳುವಾಗಿ
ಸುಳಿದಾಡುವ ಮಂಜು ಮುಸುಕಿನ
ತಂಬೆಲರನ್ನ ಹಗುರ
ನನ್ನ ತುಟಿಗಳಿಗೆ ಅದೆಷ್ಟು ಸಲೀಸು ದಾಟಿಸಿದೆ ನೀನು?

ನಿದ್ರೆಯ ಮಂಪರಿನ
ನಿನ್ನ ಧ್ವನಿ ಪಿಸುಗುಡುವ
ಎದೆಯ ಮಿದುವಿನ ಒಳಗೆಲ್ಲಾ
ಬೆಳ್ಳನೆಯ ಬೆಳಕ ಕೋಲ್ಮಿಂಚು

ಬೆಳಗು ನನ್ನ
ಕೊರಳ ಇಳಿಜಾರಿನ ಫಲಗಳನು
ಚುಂಬಿಸುವ ಮೊದಲೇ

ಅಸ್ಪಷ್ಟ
ನಾ ಕಂಡ ಅಷ್ಟೂ ಕನಸುಗಳು
ತೆರೆಗಳೆದ್ದ ಕೊಳದ ಬಿಂಬದಂತೆ
ಅನಾಯಾಸವಾಗಿ ಜಾರುವ ಬೆವರ ಜಲಪಾತ!

ಇನ್ನೇನು…
ಕೊಳ ಶಾಂತವಾಯಿತು
ನೆರಳು ಹಿಡಿದು
ಬೆಳಕ ಫಲಿಸಬೇಕು ಎನ್ನುವಷ್ಟರಲ್ಲಿ
ನಿರ್ದಯಿ ಗರುಡವೊಂದು ಹಾರಿ ಬಂದು
ನನ್ನನ್ನು ನಕ್ಷತ್ರ ಲೋಕಕೆ ಹೊತ್ತೊಯ್ಯಿತು

ನನ್ನ ಹೃದಯವನು ಮಾತ್ರ
ನಿನ್ನ ಮನೆಯ ದಾರಿಯಲಿ ಕೆಡವಿ
ಕೇವಲ ನಿನಗಾಗಿ ಮಿಡಿಯುವ ವೀಣೆಯಾಗಿಸಿತು!

ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ.
ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್.
ಓದು, ಬರಹ, ಕಾವ್ಯ, ಕಾರ್ಯಕ್ರಮ ನಿರೂಪಣೆ ಅಚ್ಚುಮೆಚ್ಚು.
ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ..

 

(ಕಲಾಕೃತಿ: ವಿನ್ಸೆಂಟ್‌ ವ್ಯಾನ್‌ಗೋ)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಕೊಟ್ರೇಶ್ ತಂಬ್ರಳ್ಳಿ ಅಮರಗೋಳ ಮಠ

    ಚೆನ್ನಾಗಿದೆ ಕವಿತೆ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ