Advertisement
ಜಯಶ್ರೀ ಬಿ ಕದ್ರಿ ಬರೆದ ದಿನದ ಕವಿತೆ

ಜಯಶ್ರೀ ಬಿ ಕದ್ರಿ ಬರೆದ ದಿನದ ಕವಿತೆ

ಇಲ್ಲಿ ನಿಶ್ಶಬ್ದ

ಇಲ್ಲಿ ನಿಶ್ಶಬ್ದ
ಆದರೆ ಸದ್ದುಗಳು
ಸಂಜೆ ಮಲ್ಲಿಗೆ ಹೂವು
ಅಲರಿಗೆ ಲಾಲಿ ತೂಗುವ ಹಾಗೆ
ಪಾರಿಜಾತದ ಹವಳದ ತೊಟ್ಟು
ಮೆಲ್ಲನೆ
ಎಲೆಯ ಕೆನ್ನೆಯ ಸವರಿದ ಹಾಗೆ

ಚಂದಿರನೇ ಬಾ
ಈ ಕೊಳದ ನಸುಗತ್ತಲಿನ
ಮೌನದಲೆಗಳಿಗೆ
ಈ ಮರದ ಮರ್ಮರ ತಾಪಕ್ಕೆ
ಈ ನೈದಿಲೆ ಹೂವಿನ
ಬೆಳ್ಳನೆ ದಳಗಳಿಗೆ
ತಂಪು ತಂಪಾಗಿ
ನಿಶೆಯೇ ಬಾ
ನಿನ್ನ ಕರಿಸೆರಗಿನ
ಮೌನ ಸಾಂತ್ವನದಲ್ಲಿ
ನಿನ್ನ ತಾರೆಗಳ ಮಿಣುಕಿನಲಿ
ನಾ ಮರಳಿ ಮಗುವಾಗುವೆ

ಪಾರಿಜಾತದ ಗಂಧ
ಅಂಗಳದಲ್ಲೊಂದು
ಪಾರಿಜಾತದ ಘಮಲು
ಮುಟ್ಟಿದರೆ ಬಾಡಿ ಹೋದೀತು
ಕನಸ ಪಕಳೆಗಳು ನಲುಗಿ ಹೋದೀತು

ತುದಿ ಬೆರಳಿಗಂಟಿದ ಪರಾಗದ ಸ್ಪರ್ಶವೇ
ಅರಳಿಸಿ ಬಿಡು ಜೀವದಲಿ
ರಾಗವನ್ನು
ಒಡಲಿನಲಿ ಚೈತನ್ಯದ ಚಿಲುಮೆಯನ್ನು

ಸಂಜೆ ಗತ್ತಲಿನ ಮೌನವೇ
ತಣಿಸಿಬಿಡು
ಒಡಲುರಿಯ ಬೇಗೆಯನ್ನು
ಬಾನ ಕಾವಳದ ರೌದ್ರವನ್ನು

ಜಯಶ್ರೀ ಬಿ ಕದ್ರಿ ಕವಯಿತ್ರಿ ಮತ್ತು ಆಂಗ್ಲ ಉಪನ್ಯಾಸಕಿ.
ಮೂಲತಃ ಕಾಸರಗೋಡಿನವರು.
ಈಗ ಇರುವುದು ತುಮಕೂರು ಜಿಲ್ಲೆ ಹುಳಿಯಾರಿನಲ್ಲಿ.

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. mmshaik

    Uttam kavana..

    Reply
  2. ಸಂಗೀತ ರವಿರಾಜ್

    ಕವಿತೆ ಚೆನ್ನಾಗಿದೆ ಅಕ್ಕ

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ