Advertisement
ಜಹಾನ್ ಆರಾ ಬರೆದ ಈ ದಿನದ ಕವಿತೆ

ಜಹಾನ್ ಆರಾ ಬರೆದ ಈ ದಿನದ ಕವಿತೆ

ತೀರದಲ್ಲಿ ನಿಂತವಳು

ಕಡಲು ಉಕ್ಕಿ ಅಬ್ಬರಿಸಿ
ಶಾಂತವಾಯಿತು ಎಂಬುವುದೇ ಭ್ರಮೆ
ತೀರದ ಸಹಜ ಅವಳ ನೋಟ
ಆ ಮೌನ ಹಾಗಲ್ಲ
ಸಾವಿನ ಬಿಲದಲ್ಲಿರುವ
ಇಲಿಯ ಮೇಲೆ ಹದ್ದಿನ ಕಣ್ಣು
ಅದಕ್ಕೂ ಆಸೆ ಮತ್ತೇನಿಲ್ಲ

ಚಂಡಮಾರುತ ಕಡಲಿಗೋ
ಅಲೆಗಳಿಗೋ ತೀರಕೋ ಮರಳಿಗೋ
ಆ ಮನಕೊ ಬುದ್ದಿವಂತರು
ಇನ್ನೂ ನಿರ್ಧರಿಸಿಲ್ಲ

ಅವಳು ತೋಳುಗಳನ್ನು ಚಾಚಿ
ನಿಂತು ಬಿಟ್ಟಿದ್ದಾಳೆ
ಕಡಲನು ಮಡಿಚಿಟ್ಟುಬಿಡಲು
ಆದರೆ, ಸೂರ್ಯ
ಜೊತೆ ನೀಡುತ್ತಿಲ್ಲ

ಭಾವ ದಿಗಂಬರವಾಗಿ ಅಲೆಯುತ್ತಿರುವಾಗ
ಅಂಬರಕ್ಕೂ ಲಜ್ಜೆಯ
ಸೆರಗು ಸರಿಸುವ ಬಯಕೆ

ಭೂಮಿಯ ನಡುಕಕ್ಕೆ ಮಾತ್ರ
ಇಲ್ಲಿ ಅಳತೆ ಪ್ರಮಾಣ
ಮುತ್ತುಗಳ ಉತ್ಪಾದಕವೆನ್ನುವರೆ ಎಲ್ಲ
ಸ್ವಾತಿ ಮುತ್ತನ್ನು ಬಂಧಿಸಿದವ
ಎನ್ನುವವರಾರು
ಈ ಕಡಲಿಗೆ
ಅದಕ್ಕೆ ಅದರದೇ ಚೆಲ್ಲಾಟ
ಮತ್ತೇನಿಲ್ಲ

ಈಗ ಅವಳಿಗೂ ಇದೇ ಅಭ್ಯಾಸ
ಆಕಾಶ ನೋಡುವುದನ್ನು ಬಿಟ್ಟು
ಸಮುದ್ರದ ಮೇಲಷ್ಟೇ ಅವಳ ದೃಷ್ಟಿ
ಥೇಟ್ ತೀರದಲಿ ಬಾಗಿ ನಿಂತ
ತೆಂಗಿನ ಮರದಂತೆ

ಜಹಾನ್ ಆರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ
ಭಾವಜೀವ, ಹಂಗಿಲ್ಲದ ಹಾದಿ ಇವರ ಪ್ರಕಟಿತ ಕವನ ಸಂಕಲನಗಳು

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ