Advertisement
ಡಾ. ಕೆ.ಎಸ್. ಗಂಗಾಧರ ಬರೆದ ಈ ದಿನ ಕವಿತೆ

ಡಾ. ಕೆ.ಎಸ್. ಗಂಗಾಧರ ಬರೆದ ಈ ದಿನ ಕವಿತೆ

ನದಿಗೊಂದು ಮನವಿ

ಎಂತಿದ್ದರೂ ಸೇರುವೆ ನೀ ಕಡಲು
ವಿಸ್ತಾರ ಜಲರಾಶಿಯೇ ನಿನ್ನ ಗಮ್ಯಸ್ಥಾನ
ನಡುವೆ ಏಕೆ ಅಬ್ಬರ.

ನದಿಯೆಂದರೆ ಮಾತೆ; ಮಾತೃ ಹೃದಯಿ.
ಮಾತೆ ಮಾಡುವಳೆ ಮಕ್ಕಳ ಹರಣ.
ನದಿಯ ತಡಿಯಲ್ಲೇ ಸಿಂಧೂ ಹರಪ್ಪದಂತಹ
ನೂರಾರು ವಸಾಹತುಗಳು ಬೆಳೆದಿವೆ.
ಸುಂದರ ಹಚ್ಚ ಹಸಿರಿನ ಕಾಡುಗಳು ಹುಟ್ಟಿವೆ.
ನೀನೇ ಪೊರೆದ ಕೂಸುಗಳ ವಿನಾಶವೇಕೆ.

ನದಿಯ ಹರಿವೆಂದರೆ ಸುಂದರ ಪಯಣ
ಸೀರೆಯುಟ್ಟ ನೀರೆಯ ಬಳುಕುವಂತಹ ನಡಿಗೆ.
ನಿನ್ನ ನಲ್ಮೆಯ ನೆನಪ ಅಳಿಸುವೆಯೇಕೆ.

ಬೇಸಿಗೆಯಲ್ಲಿ ಬತ್ತುವೆ; ಬರಗಾಲ ತರುವೆ.
ನುಗ್ಗುವ ಒರತೆಯ ಒಡಲಲಿಟ್ಟು
ವರ್ಷವಡೀ ಪೊರೆವ ಕನಸ ಕಾಣಲೊಲ್ಲೆಯೇಕೆ.

‘ಇಂತಿಷ್ಟೇ ಕಾಲದಲಿ ಇಂತಿಷ್ಟೇ ನೀರ ತರಲಿ’
ಎಂದೇನೂ ಕಡಲು ನಿಯಮ ಮಾಡಿಲ್ಲ.
ನೀ ನೀರ ತರದಿದ್ದರೂ
ಕಡಲಿಗೇನೂ ಮುನಿಸಿಲ್ಲ.
ಕಡಲೊಂದು; ನದಿಗಳು ನೂರಾರು.

ಅಬ್ಬರಿಸಲೇಬೇಕೆಂಬ ಉತ್ಕಟ ಬಯಕೆಯಾದರೆ
ಕಡಲು ಸೇರಿ ಕಡಲೊಳಗೇ ಅಬ್ಬರಿಸು
ತೆರೆಯಾಗಿ ನೊರೆಯಾಗಿ ಸ್ವಚ್ಚಂದವಾಗಿ
ಅಲ್ಲಿ ನಿನ್ನ ತಡೆವರು ಯಾರೂ ಇಲ್ಲ.

ಡಾ.ಕೆ.ಎಸ್.ಗಂಗಾಧರ ಮೆಗ್ಗಾನ್ ಆಸ್ಪತ್ರೆಯ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು(ಕಿವಿ,ಮೂಗು,ಗಂಟಲು ವಿಭಾಗ)
ಮೂಲತಃ ಹಾಸನ ಜಿಲ್ಲೆಯ ಕಾಂತರಾಜಪುರ ಗ್ರಾಮ.
ಕಥೆ ಕವನ ಮತ್ತು ಲೇಖನಗಳನ್ನು ಬರೆಯುವುದು ಇವರ ಹವ್ಯಾಸ.
ಮೊದಲ ಕವನ ಸಂಕಲನ “ಕನಸ ಪೊರೆವ ಮೌನ” ಅಚ್ಚಿನಲ್ಲಿದೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

4 Comments

  1. Bharathi rajanna

    Well composed. This poem will light up to write more.good luck.

    Reply
  2. Dr Amrutha

    Best write up. Panchabutagalu is completly above us. We have to surrender to them. Keep sharing like this. Appreciate it.

    Reply
  3. Prakash

    ಹರಿವಿನೊಂದಿಗೆ ಮುಖಾಮುಖಿ, ಅದ್ಬುತವಾದ ಸಾಲುಗಳು ಸಾರ್, ನಿಮ್ಮ’ಕನಸ‌ ಪೊರೆವ ಮೌನ’ದ ಸಾಲುಗಳ ನಿರೀಕ್ಷೆಯಲ್ಲಿ..,

    Reply
  4. Thipanna

    Well composed

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ