Advertisement
ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ತರ್ಪಣ

ತರ್ಪಣ ಬಿಟ್ಟು ಬಿಟ್ಟು ಕೈಯೆಲ್ಲ ನಡುಕ
ಕಣ್ಣುಗಳು ಮಸಕು ಮಂಜು
ಕಾಲಿಲ್ಲದ ಮುಂಡ ಶಿರವಿರದ ದೇಹ
ಸುತ್ತೆಲ್ಲ ಆಕ್ರಂದನ ಮಹಾ’ಲಯ’ ತರ್ಪಣ ತಾನೇ ನೇಯ್ದ ಬಲೆಯಲ್ಲಿ ಬಂಧಿ
ಬಿದ್ದ ಮಿಕಗಳ ವಿರಾಟ್ ಸ್ವರೂಪ
ದಿಕ್ಕುಗಾಣದೆ ಜೇಡ ಅಬ್ಬೆಪಾರಿ ಕಂಗಾಲು

ಕೌರವೇಂದ್ರನ ಅಕ್ಷೋಹಿಣಿ ಅಳಿದಿದೆ ರಣರಂಗವೆಲ್ಲ ಮರುಳುಗಳ ನರ್ತನ
ಪ್ರತಿಷ್ಠೆಗೆ ಬಿದ್ದ ಆಘಾತ ಏಟಿಗೆ ಎದಿರೇಟು ಓಡಿದವರು
ಬೆರಸಿದವರು ಸುಸ್ತೋ ಸುಸ್ತು
ನೋಡುವ ಮಂದಿಗೆ ಆತಂಕ ದಿಗಿಲು

ಕಂಡವರ ಮಕ್ಕಳ ಬಾವಿಗೆ ತಳ್ಳಿ
ಆಳ ನೋಡುವ ಮಂದಿ
ಅಂಡಲೆಯುವ ಅಶ್ವತ್ಥಾಮರು
ಉಯ್ಯಾಲೆಯಲ್ಲಿ ಮೇಲೇರಿದವರು
ಕೆಳಗೆ ಇಳಿಯದೆ ಇರಲಾದೀತೇ

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ