Advertisement
ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಯುದ್ಧಗಳು

ಯುದ್ಧಗಳಲ್ಲಿ ತೊಡಗಿಕೊಂಡವರಿಗೆ
ಕದನ ಕಳೆದರೂ
ಯುದ್ಧಗಳು ಮುಗಿಯುವುದಿಲ್ಲ
ಘಾಸಿಯಾದ ಜಗತ್ತುಗಳಲ್ಲಿ
ಕನಸುಗಳು ಮತ್ತೆ ಅರಳುವುದಿಲ್ಲ

ಬೆಂಕಿಯುಗುಳುವ ಬಾನು
ನಿಂತ ನೆಲದ ಆಸ್ಪೋಟ
ಬಿರಿದೆದೆಗಳ ಆಕ್ರಂದನಗಳು
ಅನುರಣಿಸುವುದು ನಿಲ್ಲುವುದಿಲ್ಲ

ರೌರವ ರಾತ್ರಿಗಳಲಿ ನಿತ್ಯ
ಭೇಟಿಕೊಡುವ ಪ್ರೇತಗಳು
ಮೇಲೆರಗುವ ಬಂದೂಕು
ಕನವರಿಸುವ ಹೆಸರುಗಳು ಕರಗುವುದಿಲ್ಲ

ಅಡಗಿ ಕುಳಿತ ಶತ್ರು
ಹತ್ತಿಳಿದ ಬೆಟ್ಟ-ಗುಡ್ಡಗಳು
ಪಾತಾಳ ಲೋಕದ ಭೀತಿಗಳು
ಹರಿದ ರಕ್ತದ ಕಡಲು ಮರೆಯಾಗುವುದಿಲ್ಲ

ಜಾತಿ, ಧರ್ಮ, ಜನಾಂಗಗಳು
ಗಡಿ ರೇಖೆ ಸರಹದ್ದುಗಳು
ಮನುಕುಲದ ಮರುಳುಗಳು ಘಾಸಿಗೊಂಡ
ಮನಸುಗಳ ಎಣಿಸುವುದಿಲ್ಲ

ಹೊತ್ತಿ ಉರಿವ ದ್ವೇಷಗಳು
ಪ್ರತಿಷ್ಠೆ, ಅಹಮ್ಮು, ಅಧಿಕಾರಗಳು
ಬದುಕುಗಳ ಬಲಿಯೊಡನೆ
ಜೀವಂತ ಬದುಕ ಹಿಂಡುವುದ ನಿಲ್ಲಿಸುವುದಿಲ್ಲ

ವಿಷಯಗಳ ವಿಷಮತೆಯು
ಮನುಮೃಗದ ಆಳ ಸ್ವಭಾವದಲಿ
ಮಹಾಮಾರಿಯ ಪಿಡುಗಾಗಿ
ತೆರೆ ತೆರೆಯಾಗಿ ಅಪ್ಪಳಿಸುವುದ ತಪ್ಪಿಸುವುದಿಲ್ಲ….

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

1 Comment

  1. swamy kms

    GOOD

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ