Advertisement
ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ

ಬಿಟ್ಟುಬಿಡಿ

ಇತ್ತೀಚಿಗೆ ಕನಸು ಬಿದ್ದ ಕನಸು ಬಿತ್ತು
ಯಾವಾಗ? ಎಲ್ಲಿ? ಹೇಗೆ ಬಿತ್ತು?
ಮತ್ತು
ಅಷ್ಟಕ್ಕೂ ಯಾವ ಮಹಾ ಕನಸು?
ಅವರದ್ದು ಬರಿ ಅಚ್ಚರಿ ಬೆರೆಸಿದ ಒಣ ಪ್ರಶ್ನೆಗಳು
ಸಿಹಿ ಕಹಿ ಬೆರಗು ಕೊಂಕು ನಗೆ ಹಗೆ
ಮೇಲೆ ರುಚಿಗೆ ತಕ್ಕಷ್ಟು ಕರುಣೆ
ಅವರವರ ಭಾವಾನುಸಾರ ಕೇಳಿಯೇ ಕೇಳಿದರು
ಬಿಟ್ಟುಬಿಡಿ… ನನಗದು ಮರೆತೆ ಹೋಯ್ತು ಎಂದೆ
ನಿಟ್ಟುಸಿರು ಬಿಟ್ಟರು!!!
ಈಗ ನೋಡಿ
ಮರೆತು ಹೋದದ್ದೂ ಮರೆತು ಹೋಗಿದೆ
ನೆನಪಿಲ್ಲ
ನೆನಪು ಮತ್ತು ಮರೆವು;
ಶಾಪ ಮತ್ತು ವರ
ಹಾಗೂ
ಅದರ ಅದಲು ಬದಲು
ಅವರೆನ್ನುತ್ತಾರೆ
ಎಲ್ಲವನ್ನೂ ನೆನಪಿಟ್ಟುಕೊಳ್ಳಬಾರದು
ಎಲ್ಲವನ್ನೂ ಮರೆಯಲೂಬಾರದು
ಹಾಗಾದರೆ
ಯಾವುದನ್ನು ಎಷ್ಟು ಮರೆತು ಎಷ್ಟು ನೆನಪಿಟ್ಟುಕೊಳ್ಳಬೇಕು?
ಇದೊಂದು ಯಾರಿಗೂ ಬಗೆಹರಿಯದ್ದು…
ಜನರ ಸಮಸ್ಯೆ ಅದಲ್ಲ
ಅವರು ಸಹಿಸದ ಒಂದೇ ಸಂಗತಿ ಎಂದರೆ
‘ಯಾರು ಏನು ಬೇಕಾದರೂ ಕನಸಬಹುದು’
ಅದಕ್ಕೆ
ನಮ್ಮಲ್ಲಿ ಕನಸಿನ ಸುತ್ತ ನನಸಿನ ಬಗ್ಗೆ ಅವರಿಗೆ
ಕೆಟ್ಟ ಕುತೂಹಲ ಮತ್ತು ಪುಟ್ಟ ಭಯ
ಅಥವಾ
ಇದೆಲ್ಲಾ ಬರಿ ನನ್ನ ಕನಸಿರಬಹುದು
ಊಹೆಯೂ ಇರಬಹುದು
ಹೌದು
ಇದನ್ನ ಇಷ್ಟಕ್ಕೆ
ಬಿಟ್ಟುಬಿಡಿ…

ದಾದಾಪೀರ್ ಜೈಮನ್ ಯುವ ಲೇಖಕ
ವೃತ್ತಿಯಿಂದ ಅಧ್ಯಾಪಕ
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಆಸಕ್ತಿಯ ಕ್ಷೇತ್ರಗಳು
ಇವರ ಹಲವಾರು ಕತೆ ಮತ್ತು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ