Advertisement
ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ

ಕ್ಷಮಿಸಿಬಿಡು

ನಿನ್ನ ಹೀಗೆ ಮತ್ತೆ ಮತ್ತೆ ನೋಡುತ್ತ
ನನಗೆ ಪ್ರೀತಿಯಾದರೆ
ಕ್ಷಮಿಸಿಬಿಡು

ಒಲವಾಗದಿರಲಿ ಎಂದುಕೊಂಡೇ
ನಿನ್ನತ್ತ ನೋಡುತ್ತೇನೆ
ಸಹನೆ ತುಂಬಿದ ನಿನ್ನ ಕಣ್ಣುಗಳ
ಮೌನ ಮಡಿಕೆಯ ತುಟಿಗಳ
ಕಾಣುವಾಗಲೆಲ್ಲ
ನನ್ನ ಜಗದ ಮಾತುಗಳು ಎದೆಯೊಳಗೆ ಇಳಿದು
ರೆಕ್ಕೆ ಬಡಿಯುತ್ತದೆ

“ಥತ್” ಇದೇನು ಪ್ರೀತಿಸುವ ವಯಸ್ಸೇ
ಎಂದುಕೊಳ್ಳುತ್ತ ನಿನ್ನಡಿಗಳಿಂದ
ಚಿತ್ತ ಬದಲಿಸುತ್ತೇನೆ..

“ಪ್ರೇಮಕ್ಕೂ ಕಾಲ ಮಿತಿಯೇ” ಕೇಳಿದಂತೆ
ಭಾಸವಾಗಿ ಬೇಲಿಯೊಳಗಿನ ಬಿಂಬ
ತಣ್ಣಗೆ ಚಲಿಸುತ್ತದೆ
ಮತ್ತೆ ನೀನರಿಯದ ನಿನ್ನ ನೋಟಗಳಲ್ಲಿ
ಭಾವದಲೆಗಳ ತೇಲಿಬಿಡುತ್ತೇನೆ..
ಮತ್ತೆ ಹೇಳುತ್ತೇನೆ
ನಾನು ಹೀಗೆ ತೇಲುತ್ತ ತೇಲುತ್ತ ಮುಳುಗಿದರೆ…ದಯವಿಟ್ಟು

 

ದೀಪ್ತಿ ಭದ್ರಾವತಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು.
ಈಗ ಭದ್ರಾವತಿಯಲ್ಲಿದ್ದಾರೆ.
“ಅಹಲ್ಯೆಯ ಸ್ವಗತ” (ಕವನ ಸಂಕಲನ) ಗೀರು (ಕಥಾ ಸಂಕಲನ) ಪ್ರಕಟಿತ ಕೃತಿಗಳು

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ