Advertisement
ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಈ ದಿನದ ಕವಿತೆ

ಏರ್ಪೋರ್ಟು ರೋಡಿನ ಅಜುಬಾಜಿಗೆ ಯಾವ ಗೋಜಿಲ್ಲದೆ ಬೆಳಗುವ ನಿಯಾನು ಲೈಟುಗಳ
ಬೆಳಕು
ಈಗಷ್ಟೇ ರಾಕೆಟ್ಟು ವೇಗ ಮಿತಿಯಲ್ಲಿ ಸಾಗಿದ ಕ್ಯಾಬಿನ ಡ್ರೈವರನ ಕಣ್ಣ ಕೆಳಗಿನ ಸಣ್ಣ ಕಲೆ ಕಾಣುವಷ್ಟು ಪ್ರಖರವಾಗಿದೆ.

ನಿತ್ಯ ಇಂಗಾಲದ ಸಾಂಗತ್ಯದಲ್ಲಿ ಆ ಹಾದಿ ಬದಿಯ
ಕ್ರೋಟಾನು, ಕಣಗಿಲುಗಳು ಶುದ್ಧೀಕರಿಸಿದ ನೀರಿಗೆ ಬೇರೊಡ್ಡಿ ನಳನಳಿಸುತಿವೆ.
ಮೈ ತುಂಬಾ ಹೂಮುಡಿದು,
ಇಲ್ಲವೆ ಎಲೆ ಹೊದ್ದು.

ಸಾಗುವ ವೇಗಕ್ಕೆ ಒಳಗಿದ್ದವರ
ಭಾವ ಅರಿವಾಗದಿದ್ದರೂ
ಗಡಿಬಿಡಿಯಿರದ ಬಿಗಿದ ಮೋರೆ,
ಚಡಪಡಿಕೆ ಮರೆತ ಸೆಟೆದ ಭಾವ,
ಚಷ್ಮದ ಒಳಗಿಂದ ಶುಷ್ಕ ನೋಟ…

ಅಂದು ಅದೇ ಹಾದಿಯಲ್ಲಿ ನಾನು.
ಮೊದಲ ಸಲ ಹಾರುವ, ವಿಮಾನವೇರುವ
ತವಕ.. ತಲ್ಲಣ..
ಛಿಲ್ಲೆನುತಿತ್ತು ಎದೆ.
ಮನಸು ಮರಿಹಕ್ಕಿಯಿರುವ ಗೂಡು.
ಕಣ್ಣು ಕುತೂಹಲದ ಬೀಡು.!
ಉಕ್ಕುವ ಉತ್ಸಾಹ ಕಂಡು ಪಕ್ಕದವ ಗೊಣಗಿದ.
‘ಮೆ ಬಿ ಫರ್ಸ್ಟ್ ಟೈಮ್.!!’

ಖಾಲಿಖೋಲಿಯ ಗೋಲಿಗಣ್ಣೇ
ನವನಾಗರೀಕತೆಯ ಕುರುಹಾಗಿರುವಾಗ
ಕಿವಿಯಿಂದ ಕಿವಿವರೆಗೆ ನಗುತ ನಡೆಯುವುದು,
ಹಣೆಯಲಿಷ್ಟು ಬೆವರು ಹೊಳೆಯುವುದು
ಸಭ್ಯ ಸಂಸ್ಕೃತಿಯಾಗದೇನೋ
ಎನಿಸಿದಾಗ ನಮ್ಮೂರ ರೈಲು ನಿಲ್ದಾಣ
ನೆನಪಾಯಿತು ಯಾಕೋ.

ಸೊನ್ನೆಗಣ್ಣ ಜನರೊಡನೆ
ಪುಳಕ ಹೊದ್ದವರು
ಅನ್ಯ ಗ್ರಹ ಜೀವಿಯಂತೆನಿಸಿ
ಕೊಂಡಾರು ಎನಿಸಿದಾಗ
ನನ್ನದಲ್ಲದ ಒಣನಗುವೊಂದು
ಮೊಗದಲ್ಲಿ.

ಅರೆರೆ.,ಈಗ…! ಈಗ…!!
ನಾನೂ ನಾಗರೀಕ ಜನರ
ನಡುವೆ ಸಲ್ಲಬಹುದೇನೋ.?

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ