Advertisement
ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಗಜಲ್

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಗಜಲ್

ಕಡುನೋವಿನ ಕುರಿತು ಹಾಡೊಂದು ಬರೆಯಬಲ್ಲೆ ಈ ರಾತ್ರಿ..
ಖಾಲಿ ನಿಲ್ದಾಣದ ಕುರಿತು ಬರೆಯಬಲ್ಲೆ ಈ ರಾತ್ರಿ

ಹಾಡು ಹಕ್ಕಿಯ ರೆಕ್ಕೆ ಕತ್ತರಿಸುತಿದೆ ಹಾಳಾದ ಕಡು ಒಲವು
ವಲಸೆ ಹೊರಟವನ ಕುರಿತು ಬರೆಯಬಲ್ಲೆ ಈ ರಾತ್ರಿ

ಎದೆಯ ರುದ್ರಭೂಮಿಯಲ್ಲಿ ಮುಕ್ತಿ ಕಾಣದ ಎಷ್ಟೊಂದು
ಹೃದಯಗಳು..
ಹಚ್ಚಿಕೊಂಡ ನಂಬಿಕೆಯೊಂದು ಚುಚ್ಚಿ ನೋಯಿಸಿದ ಕುರಿತು ಬರೆಯಬಲ್ಲೆ ಈ ರಾತ್ರಿ

ಮಿಲನ ಮುಂಗಾರು, ಚುಂಬನದ ‘ಹನಿ’ಸೋನೆ
ಬೆದೆಗೆ ಬಯಲಾದ ಕಾಯ..
ಭರವಸೆಗಳೆಲ್ಲಾ ಬಸವಳಿದು ಬಳಲಿದ ಕುರಿತು ಬರೆಯಬಲ್ಲೆ ಈ ರಾತ್ರಿ..

 

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. jvramesh24

    ಚೆನ್ನಾಗಿದೆ! ???

    Reply
  2. Prajna

    very nice poem nandini

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ