Advertisement
ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಇಳವಾಯಿ ವಿಜಯೇಂದ್ರನ್ ಅವರ ತಮಿಳು ಕವಿತೆ

ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಇಳವಾಯಿ ವಿಜಯೇಂದ್ರನ್ ಅವರ ತಮಿಳು ಕವಿತೆ

ಕಳೆದು ಹೋದವರು

ಆಲದ ಮರಕ್ಕೆ ಜೋತು ಬಿದ್ದ
ಉದ್ದುದ್ದ ಬಿಳಿಲುಗಳು
ಆ ಕಾಲಕ್ಕೆ ಅವನ್ನು ಹಿಡಿದು ಜೋಕಾಲಿ ಆಟ ಆಡುತ್ತಿದ್ದ ನಾವು.
ಅನತಿ ದೂರದ, ಪೊನ್ನೊಚ್ಚಿ ಮರ
ನಗುತ್ತಿರುವ ಅದರ ಹೂಗಳು.
ಪೂರ್ವಕ್ಕೆ, ಮುಂಗಾರು ಮಳೆಯಿಂದ ಉಕ್ಕಿ ನಿಂತ
ವಿಶಾಲ ಕೆರೆ.

ಮುಪ್ಪಾಗಿ ಬಿದ್ದ ತಾಳೆ ಮರದ ಬುಡದಿಂದ ಮಾಡಿದ್ದ ದೋಣಿಯಲ್ಲಿ
ಸಮಯವೇ ಹುಟ್ಟಾಗಿ, ಆ ದಡಕ್ಕೆ ಸಾಗುತ್ತಿದ್ದ
ಮಕ್ಕಳಷ್ಟೆ, ಕಣ್ಮರೆ!

– ಈ ಯುದ್ದದ ಎಲ್ಲ ಬಾಂಬುಗಳಿಗೂ ತಲೆಯನ್ನು ತಗ್ಗಿಸದೇ ಹೋದ-
ತಾಳೆ ಮರ ಹತ್ತಿ
ತೋಡಿ ಇಳಿಸುತ್ತಿದ್ದ ಮುದುಕನನ್ನು ಕೇಳಿದೆ.
ಇವರೆಲ್ಲ ಎಲ್ಲಿ?

ಉದ್ವೇಗದಿಂದ ಅವನು ಹೇಳಿದ,
“ಅವರೆಲ್ಲಾ ಕೆನಡಾ ದೇಶದ
ಹಣದ ಹೊಲಗಳನ್ನು ಕಟಾವು ಮಾಡಲು ಹೋಗಿದ್ದಾರೆ.”

ತಮಿಳು ಮೂಲ: ಇಳವಾಯಿ ವಿಜಯೇಂದ್ರನ್
ಇಂಗ್ಲೀಷ್ ಗೆ: ಲಕ್ಷ್ಮಿ ಹಾಲ್ಸ್ಟ್ರಾಮ್

About The Author

ನರೇಂದ್ರ ಶಿವನಗೆರೆ

ವೃತ್ತಿಯಲ್ಲಿ ವಿಜ್ಞಾನದ ಮೇಸ್ಟ್ರು, ಸಾಹಿತ್ಯ ಮತ್ತು ಪ್ರಪಂಚದ ಸಿನಿಮಾ ಬಗ್ಗೆ ತುಂಬಾ ಆಸಕ್ತಿ. ಕಳೆದ ಹತ್ತು ವರ್ಷಗಳಿಂದ ದೇಶ ಬಿಟ್ಟು ಅಲೆಮಾರಿ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ