Advertisement
ಪ್ರಕಾಶ್ ಪೊನ್ನಾಚಿ ಬರೆದ ಹೊಸ ಕವಿತೆ

ಪ್ರಕಾಶ್ ಪೊನ್ನಾಚಿ ಬರೆದ ಹೊಸ ಕವಿತೆ

ಪಾರ್ಥೇನಿಯಂ

ಎದುರು ಬೆಳೆದ ಪಾರ್ಥೇನಿಯಂ ಗಿಡವನ್ನ
ಅಕ್ಕ ದಿಟ್ಟಿಸುತ್ತಾ ಕುಳಿತಿದ್ದಳು

ಏಕೆ ಈ ಪಾರ್ಥೇನಿಯಂಗಳು
ಸಸ್ಯ ಸಾಮ್ರಾಜ್ಯದಿಂದ ತಿರಸ್ಕಾರಗೊಂಡಿವೆ
ಅಸ್ಪೃಶ್ಯತೆಯ ಬೆಂಕಿ ಇವಕ್ಕೂ ತಾಕಿತೆ?
ಅದೆ ಕವಲೊಡೆದುಕೊಂಡ ಹೂ
ಅದೆ ನೀಳ ಬೇರು ಹಸಿರು ಕಾಂಡ
ಆದರೂ ಮುಟ್ಟಿಸಿಕೊಳ್ಳುವುದಿಲ್ಲ
ಇದೇಕೆ ಎಂದೆ
ಅಕ್ಕ ಸುಮ್ಮನೆ ಕುಳಿತಿದ್ದಳು

ಇವಕ್ಕೂ ಅದೇ ಪರಾಗ ಅದೇ ಘಮಲು
ಅರೆ ಈ ದುಂಬಿಗಳೇಕೆ
ದೂರವೇ ಹೋಗುತ್ತಿವೆ
ಇವೂ ಮತ್ತದೇ ಇಂಗಾಲವನೆ ಉಸಿರಿಗಚ್ಚಿವೆ
ಆಮ್ಲವನೆ ಹೊರಗಟ್ಟಿವೆ
ಶೃಂಗಾರಕೆ ನಗುಮೊಗದ ಹೂವನೇ
ಹಡೆದಿವೆ
ಆದರೂ… ಎಂದೆ
ಅಕ್ಕ ತಲೆ ತಗ್ಗಿಸಿದಳು

ಪಾಪದ ಎಲೆಗಳ ಸೊಂಟಕ್ಕೆ ಸಿಕ್ಕಿಸಿಕೊಂಡು
ಬೇರು ಹಿಡಿದುಕೊಳ್ಳುವ ಮಣ್ಣು
ಎಂದಿಗೂ ವಿರಾಗಿಯಾಗಲಿಲ್ಲ
ಆದರೀ ಬಿರುಕು
ನೇಗಿಲಿಗೆ ಸಿಕ್ಕ ಗಾಯದ ಕಾಂಡವನು
ಮತ್ತೆ ಹುಣ್ಣಾಗಿಸಿ
ಗಾಸಿಗೊಳಿಸುವ ಕ್ರಿಯೆ ವಿಚಿತ್ರ ಎಂದೆ
ಅಕ್ಕ ಮುಖಮುಚ್ಚಿದಳು

ಯಾರೋ ಕಳೆ ಎಂದರು
ಇನ್ಯಾರೋ ರೋಗ ಎಂದರು
ಮತ್ಯಾರೋ ಅನಾಥ ಭೂಮಿಯಲಿ
ಸೊಂಪಾಗಿ ಬೆಳೆದು ನಿಂತಾಗ
ಗಹಗಹಿಸಿ ಮುಂದೆ ಹೋದರು
ಎಂಥಾ ನೋವು ಅಲ್ಲವೆ ಎಂದೆ
ಅಕ್ಕ ಕಣ್ಣಲಿ ನೀರಿಳಿ ಬಿಟ್ಟಳು

 

ಮೂಲತಃ ಹನೂರು ತಾಲೂಕಿನ ಪೊನ್ನಾಚಿಯ ಪ್ರಕಾಶ್ ಸದ್ಯ ಒಡೆಯರ್ ಪಾಳ್ಯದಲ್ಲಿ
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ
ಓದು ಮತ್ತು ಕವಿತೆಗಳ ರಚನೆ ಇವರ ಹವ್ಯಾಸ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. nutana doshetty

    kaviteya bhava sundaravagide. Adare Gidagantigalannadaroo bittubidona. Avakkoo eke asprashyateya benkiya dhage !! Naavu manushyaru anubhavisuttituvudu saakallave .

    Reply
  2. ಲಿಂಗರಾಜ ಸೊಟ್ಟಪ್ಪನವರ

    ಮುಟ್ಟಿಸಿಕೊಳ್ಳಲಾಗದ ಪಾರ್ತೇನಿಯಂ.. ಚನ್ನಾಗಿ ಸರ್

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ