Advertisement
ಭರತ್ ಕುತ್ತೆತ್ತೂರು ಬರೆದ ಈ ದಿನದ ಕವಿತೆ

ಭರತ್ ಕುತ್ತೆತ್ತೂರು ಬರೆದ ಈ ದಿನದ ಕವಿತೆ

ಸಂಭ್ರಮಿಸಿದ್ದೋ ಅಥವಾ ಭ್ರಮಿಸಿದ್ದೋ

ಮತ್ತೆ ಮತ್ತೆ
ಯಾಕೋ ನಿನ್ನನ್ನೇ
ಹುಡುಕುತ್ತಿರುತ್ತೇನೆ
ನೀನ್ಯಾರೆಂಬ ಅರಿವಾದರೂ
ನನಗುಂಟೊ ಇಲ್ಲವೊ

ನಿನ್ನ ಸಾಮೀಪ್ಯವನ್ನು
ಸಂಭ್ರಮಿಸಿದ್ದೋ
ಅಥವಾ
ಆಪ್ತರಾಗಿ ನಾವು
ಜೊತೆ ಜೊತೆಗೆ
ನಡೆದಂತೆ
ನಾನು ಭ್ರಮಿಸಿದ್ದೋ

ಎಲ್ಲವೂ ಸ್ಪಷ್ಟವಾಗೊ ಮುನ್ನ
ಅದ್ಯಾವುದೋ
ದಾರಿಯ ತಿರುವಲ್ಲಿ ನೀ
ಮರೆಯಾಗಿ
ನಾವು ಅಪರಿಚಿತರಾದಂತೆ

ಕಾಲಡಿಯ ಭೂಮಿ
ಮೇಲಿನ ಆಕಾಶ
ಒಂದೇ,
ಆದರೆ
ಸಾಗುವ ದಾರಿಗಳು
ಲೆಕ್ಕವಿರದಷ್ಟು

ಗುರುತುಳಿಸದೆ
ಸವೆಸಿದ ಹೆಜ್ಜೆಗಳು
ಮತ್ತೆಲ್ಲೋ ಸಂಧಿಸಬಹುದು
ಅಥವಾ
ವಿರುದ್ಧ ದಿಕ್ಕಿನಲ್ಲಿ
ಕೊನೆಗೊಳ್ಳಬಹುದು
ಮುಂದಿನದೆಲ್ಲವು
ಬರೀ ಅನುಭಾವ

 

ಭರತ್ ಕುತ್ತೆತ್ತೂರು ಮಂಗಳೂರಿನ ಕಾಟಿಪಳ್ಳ ಸಮೀಪದ ಕುತ್ತೆತ್ತೂರು ಗ್ರಾಮದ ನಿವಾಸಿ
ಖಾಸಗಿ ಉದ್ಯೋಗದಲ್ಲಿರುವ ಭರತ್ ಅವರಿಗೆ ಸಾಹಿತ್ಯದ ಓದು ಬರಹ ಮತ್ತು ಪ್ರವಾಸ ನೆಚ್ಚಿನ ಹವ್ಯಾಸಗಳು

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ