Advertisement
ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

ಬೇಗುದಿ

ಅವಳೆದೆಯ ಬೇಗುದಿ
ಆರದೊಲೆಯ ಕೆಂಡದಂತೆ
ದಹಿಸಿದೆ ಭಾವಗಳ ಇಂಚಿಂಚಾಗಿ
ಕಣ್ಣೀರಿನ ಒರತೆಯೂ ಬತ್ತಿರುವಾಗ
ಅವಳಿಗೀಗ ಜಗವೇ ಬರಡು
ಎದೆಯ ಭೂಮಿಯಲ್ಲಿ ಬರಿಯ
ಬಿರುಕುಗಳು…
ಅವಳ ದನಿಯೇಕೋ
ಈಗ ಗುನುಗುಲಾರದು
ಹಾಡಿಗೆ ನೋವು ಬಿಡಿಸಲಾರದ ಅಂಟು
ಆಸೆಯ ಹಕ್ಕಿಗಳು
ಹಾರಲಾರವೀಗ
ಮನವೇ ಪಂಜರದ ಗೂಡು
ಮಾಸಬಾರದು ಮುಖವೆಂದು
ಜನರ ಮೆಚ್ಚಿಸಲು
ಹುಸಿ ನಗೆಯ ಲೇಪಿಸುತ್ತಾಳೆ ತುಟಿಗೆ
ತನ್ನ ನಗುವಿಗೆ‌ ತಾನೇ
ಶಪಿಸಿ ಸುಮ್ಮನಾಗುವಂತೆ
ಪ್ರೀತಿಯ ಮೊಗೆಮೊಗೆದು
ಎರೆದವಳೀಗ ಅನಾಥೆ
ಬದುಕಾಗಿದೆ ಒಂಟಿ ಸಂತೆ
ಬಿಕರಿಗೆ ಭಾವಗಳಿಲ್ಲದೆ….

ಭವ್ಯ ಟಿ.ಎಸ್. ಕನ್ನಡ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕಾನುಗೋಡು
ಹೊಸನಗರ, ಶಿವಮೊಗ್ಗ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ