Advertisement
ಭುವನಾ ಹಿರೇಮಠ ಬರೆದ ಹೊಸ ಕವಿತೆ

ಭುವನಾ ಹಿರೇಮಠ ಬರೆದ ಹೊಸ ಕವಿತೆ

ಅರ್ಧ ನೆರಳು

ಖಾಲಿ ಹಾಳೆಯ ಮೇಲೆ ನಿಶಾಂತ ಬೆಳಕು
ಘೋರ ಆಗಸಕ್ಕೆ ಧುಮುಕಿದ ಎಳೆಗೂಸು ನಕ್ಷತ್ರ
ಈಜು ಹೊಡೆಯುವ ಧಾವಂತದಲ್ಲಿ ಕೈಕಾಲು ಬಡಿಯುತ್ತಾ
ಬಿದ್ದೆನೋ ಎದ್ದೆನೋ ತಿಳಿಯದೆ
ಭ್ರಮೆಯೊಳಗೆ ತೇಲುತಿರಲು

ಬಿಕನಾಸಿ ಜ್ಯೋತಿರ್ವರ್ಷಗಳಷ್ಟು ದೂರ ಸಾಗುತ್ತಾ ಸಾಗುತ್ತಾ
ಎಲ್ಲಿ ಕಣ್ಣು ನೆಟ್ಟರೂ
ಅರ್ಧ ತಾಯಿ
ಅರ್ಧ ತಂದೆ
ಅರ್ಧ ನೆರಳು
ಉಳಿದರ್ಧವೆಲ್ಲ ಕುಲಿಗೇಡಿ ಕ್ಯಾಲೆಂಡರುಗಳು

ತಿರುವಿದಷ್ಟೂ ಅನಾಥ ತಾರೀಖುಗಳ ಹಾವಳಿ,
ಮುಂದಿನ ವರ್ಷದ ದಿನಗಳ ಹಡೆದವರು
ನಡುವಿಶ್ವದಲಿ ಅನೀತಿ ಕೈಬಿಟ್ಟು ಹೋಗಿ
ಹಿಂತಿರುಗದೆ ನಡೆವಾಗಿನ ಕಳವಳವನೆಲ್ಲ ಈ ಕೂಸಿನ ಉಡಿಯೊಳಗೇ ಬಿಟ್ಟು ಹೋದರಂತೆ
ಅವತ್ತೇ ಅವರಿಗೂ ಅವರ ಅಜ್ಜ ಮುತ್ತಜ್ಜರಿಗೂ ಸ್ವರ್ಗ ಪ್ರಾಪ್ತಿ

ಯಾವುದೋ ರೈಲು ನಿಲ್ದಾಣದ ವೇಟಿಂಗ್ ರೂಮಲ್ಲಿ
ಅಡ್ಡಾದಿಡ್ಡಿ ನಿದ್ದೆಹೋದ ಯಾತ್ರಿಕರ ಹಿಂಡಿನಲ್ಲಿ
ಎದ್ದು ನಡೆವ ಕನಸುಗಳ ತಡವಿದಾಗ

ಬೆಳಕು, ಈಜು, ಆಗಸ
ಕ್ಯಾಲೆಂಡರು ತಂತಾನೇ ತಿರುವಿಕೊಂಡು ಹರವಿಕೊಂಡು
ಅಪ್ಪಿಕೊಂಡು ಕೈಹಿಡಿಯುವ ಅಪರಂಜಿ ದಿನ ಜಲ್ಮ
ನಡೆಯುವುದೇ ನಡೆಯುವುದು ನಡೆಯುವುದು
ಮತ್ತೆ
……..
ನಡೆಯುವುದು

 

ಭುವನಾ ಹಿರೇಮಠ ಯುವ ಕವಯತ್ರಿ
ಬೆಳಗಾವಿ ಜಿಲ್ಲೆಯವರು
ಸರಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯಲ್ಲಿ ಗಣಿತ ಶಿಕ್ಷಕಿ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ