Advertisement
ಯಶಸ್ವಿನಿ ಎಂ.ಎನ್‌. ಬರೆದ ಈ ದಿನದ ಕವಿತೆ

ಯಶಸ್ವಿನಿ ಎಂ.ಎನ್‌. ಬರೆದ ಈ ದಿನದ ಕವಿತೆ

ಒದ್ದೆಯಾಗಿದ್ದವು ನೆನಪುಗಳು

ಅವ್ವನ ಮೊಣಕಾಲುಗಳು ಮೇಲೆ ಹಸುಗೂಸು
ಹಾಲ್ಗೆನೆಯ ದೇಹ
ಬೆಣ್ಣೆಯಂತಹ ಬೆನ್ನಿನ ಮೇಲೆ
ಬಿಸಿನೀರು
ಕೆಂಪಾಯ್ತು ರತ್ನೀರು

ತಾಮ್ರದಂಡೆಯ ನೀರು
ಮೀನಖಂಡದ ಮೇಲೆ
ಹರಿವ ನೆತ್ತರು
ತಾರಸಿ ಗೋಡೆಯ ಬುಡದಲ್ಲಿ
ಬಿರಿದ ಮೊಗ್ಗಿನೆಡೆಗೆಯೇ ಅವ್ವನ ದಿಟ್ಟಿ

ಮಾಗಿದ ಮೈಗೆ ಹರಿಶಿಣದ ಚಿತ್ತಾರ
ಮನೆಯ ಮುಂದೆ ನೆಂಟರ ಕಲರವ
ಹಸಿರಾಯ್ತು ಗುಳ್ಳು
ಅವ್ವ ಸೆರಗು ಒದರಿ ತೆಗೆದಳು ದೃಷ್ಟಿ

ಅವ್ವನ ಒಡೆದ ಅಂಗೈಯಲ್ಲಿ ನನ್ನ ಕೂಸು
ಗರ್ಭವನ್ನು ಬಿಗಿದು ಹಿಡಿದಿದ್ದ ದಾರದಲ್ಲಿ
ಬೆಸೆದುಕೊಂಡಿದ್ದವು ಐಲು ಕನಸು

ಹಾಳೆಗೆ ಅಂಟಿರುವ ತಾರೀಕಿನ ಚೌಕಟ್ಟಿನೊಳಗೆ
ಸಮಯ ಕರಗುವ ಸರದಿ
ಸುಕ್ಕುಗಟ್ಟಿರುವ ದೇಹದ ಮೇಲೆ ಸುಡುವ ನೀರು ಕಡುಗಪ್ಪು ಇದ್ದಿಲು
ಸಿಕ್ಕುಗಟ್ಟಿರುವ ನೆರೆತ ತುರುಬಿನೊಳಗೆ
ಒದ್ದೆಯಾಗಿದ್ದವು ನೆನಪುಗಳು

ಯಶಸ್ವಿನಿ. ಎಂ.ಎನ್ . ಮೈಸೂರಿನವರು
ಹಿಂದೂಸ್ತಾನ್ ಕಾಲೇಜಿನಲ್ಲಿ ಆಂಗ್ಲಭಾಷಾ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಇವರ ಹಲವು ಕವಿತೆಗಳು ಹಾಗು ಲೇಖನಗಳು ಬೇರೆಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಚಿತ್ರಕಲೆ, ಪುಸ್ತಕಗಳನ್ನು ಓದುವುದು ಮತ್ತು ನಾಣ್ಯ ಸಂಗ್ರಹಣೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಶ್ರೀ ತಲಗೇರಿ

    ಒಂದೊಳ್ಳೆ ಕವಿತೆ, ಹೀಗೆ ಭಿನ್ನ ಸಂಗತಿಗಳು ಹೊಸ ತಲೆಮಾರಿನ ಬರಹಗಾರರ ಬರಹಗಳಲ್ಲಿ ಕಂಡುಬಂದಾಗ ಹೊಸ ಭರವಸೆ ಮೂಡದೇ ಇರೋದಿಲ್ಲ​!

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ