Advertisement
ಯಾರು ಹುಚ್ಚ?: ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಯಾರು ಹುಚ್ಚ?: ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಯಾರು ಹುಚ್ಚ?

ಬೃಹತ್ ಹುಚ್ಚನಂತೆ ಕಂಡ
ಖ್ಯಾತ ಡಬ್ಲುಬಿ ಯೇಟ್ಸ್
ಬೈಜಾಂಟಿಯಂ ಕವನದಲ್ಲಿ

ದುರಾಸೆ ಹಿಮ ಪರ್ವತದ ಸಾಲು
ಈ ಹಣ್ಣು ಹಣ್ಣು ಮುದುಕನದು
ಬಾಡುವ, ಸವೆಯುವ ಯೌವನದ ಬಗ್ಗೆ

ಸಂಪೂರ್ಣವಾಗಿ ಅರೆದು, ಕುಡಿದು,
ತುಳಿದು ಜೀವನ ದಾರಿ ನೀರಂತೆ, ಸಾಕಾಗಿಲ್ಲ
ಮತ್ತೆ ಮತ್ತೆ ಬಯಕೆ ಉತ್ಕರ್ಷ

ಬೇಡುವ ಚಿರಯೌವನ
ಮುಗಿಯದಂತೆ ಹಚ್ಚ ಹಸಿರು
ಹುಲ್ಲುಗಾವಲು ಮುದಿವಯಸ್ಸಿನಲ್ಲೂ

ಎಲೆ ಮರುಳೇ, ಹುಂಬ ಗಾಳಿ
ಸಾಕಿಲ್ಲವೇ ಜೀವನ ಅನಿವಾರ್ಯ
ಮುಗಿಸು ನಿನ್ನೆ ಸಂತೆ ಬೇರೂರಿಗೆ

ವಿರಾಮವಿಡು ನಿನ್ನೀ ಜಗದಗಲ
ಆಸೆ, ನಡೆ ಮುಂದೆ ಮುಂದೆ
ದೇವರ ಅನಂತ ಅನುಭಾವ ಸಾನ್ನಿಧ್ಯಕ್ಕೆ

ಸ್ಥಿತಿ ನೋಡಿ ಸಾಮಾನ್ಯರದು
ಹರೆಯ ಇದ್ದರೂ ಚಿಂತೆ
ಕಳೆದು ಹೋದ ತಿದ್ದಲಾರದ ದಿನಗಳು

ತಪ್ಪಿಲ್ಲ… ಡಬ್ಲ್ಯು ಬಿ ಯೇಟ್ಸ್ ಮುಪ್ಪಿನಲ್ಲಿ ಯೌವನನದ ಬಯಕೆ ಯೌವನನದಲ್ಲಿ ಕಳೆದುಹೋದ ಸತ್ತ ದಿನಗಳ ಒಟಗುಡುಗುವಿಕೆ
ಹೊಸ ಸಂತತಿ


ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.

ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ.
ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

3 Comments

  1. ಮಲ್ಲಿಕಾರ್ಜುನ ಎಸ್ ಇಂಚಲ

    ಸೊಗಸಾಗಿದೆ ಕವಿತೆ….
    ಬದುಕಿನಲ್ಲಿ ಎಲ್ಲರೂ ಹುಚ್ಚರೆ….
    ಇದ್ದದ್ದನ್ನು ಅನುಭವಿಸದೆ ಕಳೆದು ಹೋದ ಕಾಲಕ್ಕೆ.ಭವಿಷ್ಯದ ಬಗ್ಗೆ ಹಪಹಪಿಸುವ ಪ್ರತಿ ಮನಸ್ಸುಗಳು ಹುಚ್ಚೆ.
    ಡಬ್ಲೂ ಬಿ ಏಟ್ಸ್ ಅವರ sailing to Byzantium ಕವಿತೆಯನ್ನು ಇಟ್ಟುಕೊಂಡು ಎಷ್ಟು ಸೊಗಸಾಗಿ ಬದುಕಿನ ಬದಲಾವಣೆಗಳನ್ನು ವರ್ಣಿಸಿದ್ದೀರಿ….
    ಅಭಿನಂದನೆಗಳು ಮೆಡಮ್.

    Reply
    • Mala

      Tq sir

      Reply
    • Mala

      ಧನ್ಯವಾದಗಳು ಸರ್

      Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ