Advertisement
ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು

ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು

ಎರಡು ತಲೆ ಹಾವು

ಎರಡು ತಲೆ ಹಾವು
ಅಂತ ಅವಳಂದಾಗ
ನಕ್ಕುಬಿಟ್ಟೆ.

ಕತ್ತಲಿನ ದೂರದಲಿ
ಹೆಜ್ಜೆಸಪ್ಪಳಕೆ ಬೆಚ್ಚಿದ
ಮುದುಡು ಸಿಂಬಿಗೆ
ಕೇದಗೆಯ ಮುಡಿಸಿ
ಸಿಂಗರಿಸಿದ ಮಡಿಲ
ತುಂಬಿ ವಿಷತುಂಬಿದೆ.

ಹಣೆಯ ಮಣಿಯ
ಮುತ್ತಿಕ್ಕಿದಾಗೆಲ್ಲ
ಗಾಯ ಮೂಡಿಸಿದ್ದೆ
ನುಣುಪು ಮೈಯನು
ಬಳಸಿ ತೆಕ್ಕೈಸಿದಾಗೆಲ್ಲ
ಪೊರೆ ಕಳಚುತ್ತಲಿದ್ದೆ.

ಒಳ್ಳೆಯವ, ಚಟವಿಲ್ಲ
ಕಾಫಿ, ಟೀ ಕೂಡ ಇಲ್ಲ
ಸಕ್ಕರೆ ರಹಿತ ಹಾಲು
ಬೆಳ್ಳಿಗಿಂಡಿಯಲಿ ಕೊ
ಎನುವಾಗ ನಾಲಿಗೆಯ
ಚಾಚಿ ತುಟಿ ಸವರುವ
ಚಣದಲಿ ಗೊಣಗುವಳು
ಎರಡು ತಲೆ ಹಾವು! –

ಸಿಂಡರೆಲಾ

ಕನಸಿನ ಗಾತ್ರದಿಂದ
ವಾಸ್ತವಕ್ಕೆ ಕುಗ್ಗಿದ
ನೀ ಬಿಟ್ಟುಹೋದ
ಚಪ್ಪಲಿಯ ಹೊತ್ತು
ಹಾದಿ ಬೀದಿಯಲೆದೆ
ಸರಿ ಪಾದದಳತೆಗೆ,
ಸಿಗಲೇ ಇಲ್ಲ ನೀನು
ವಾಸ್ತವದ ಜೋಡಿಗೆ
ವಿಧಿ ತಾರದ ವಧು
ಸಿಂಡರೆಲಾ!

ಎಲ್ಲಿದ್ದೀಯ
ಸಿಂಡರೆಲಾ

 

ರಘು ವೆಂಕಟಾಚಲಯ್ಯ ಅವರು ಸದ್ಯ ಬೆಂಗಳೂರಿನ ‘ಸಿಲಿಕಾನ್ ಸಿಟಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಾಮರ್ಸ್’ ನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಪ್ರಾಧ್ಯಾಪಕರೂ ಆಗಿ ಕಾರ್ಯನಿರ್ವಹಿಸಿರೋ ರಘು ಅವರು ವಿವೇಕ ಹಂಸ ಮಾಸಿಕ ಪತ್ರಿಕೆಯ ಗೌರವ ಸಂಪಾದಕರೂ ಆಗಿದ್ದಾರೆ.
“ಬಿದಿರಿನ ಗಳ” ಇತ್ತೀಚೆಗೆ ಪ್ರಕಟಗೊಂಡ ಇವರ  ಕಾದಂಬರಿ
ಅನುವಾದಕರೂ ಆದ ರಘು ಅವರು ಹಲವು ಪುಸ್ತಕ ಹಾಗೂ ಲೇಖನಗಳನ್ನು ಭಾಷಾಂತರಿಸಿದ್ದಾರೆ.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ