Advertisement
ರಾಜು ಹೆಗಡೆ ಬರೆದ ಈ ದಿನದ ಕವಿತೆ

ರಾಜು ಹೆಗಡೆ ಬರೆದ ಈ ದಿನದ ಕವಿತೆ

ಜಾಗ..

ತಂಪು ಕಂಪನವನ್ನು ಮಾಡಿದ
ಆ ಜಾಗಗಳೆಲ್ಲ
ಒಣಗಿಹೋದಂತಿವೆ

ಅಲ್ಲಿ
ಹಸಿರು ಹೂಗಳನ್ನು
ಹೊದೆದುಕೊಂಡಿದ್ದೆ
ಸಂಜೆಯ ಮಂಜಿನಲ್ಲಿ
ಮುಂಜಾನೆಯಾಗಿದ್ದೆ!
ನೋವು ನಲಿವಿನ ಅವಳ
ಒದ್ದೆಯಾದ
ಮಾತುಗಳನ್ನು ಆಲಿಸಿದ್ದೆ

ಈಗ ಅವೆಲ್ಲ
ಅಪಘಾತವಾದ ಜಾಗದಂತೆ
ತಣ್ಣಗೆ ಮಲಗಿವೆ

ಯಾವ ಕಂಪನವಾಗಲಿ
ಮಾರುತ ಚಂಡನಾಗಲಿ
ಧಗಧಗ ಉರಿಯಾಗಲಿ….

ಏನಾದರೂ
ಏನೂ ಆಗುವುದಿಲ್ಲ

ಮತ್ತೆ
ನಗು ಅಳು ಆಸೆ ಕನಸು
ಎಲ್ಲ ಅಲ್ಲಿ ಹಾದುಹೋಗುತ್ತವೆ

ನಾನು ಹೋಗುವ ಹಾಗೆ.

About The Author

ರಾಜು ಹೆಗಡೆ

ಕವಿಗಳು, ಲೇಖಕರು ಮತ್ತು ಸಿರಸಿಯ ಎಂ ಎಂ ಕಾಲೇಜಿನಲ್ಲಿ ಉಪನ್ಯಾಸಕರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ