Advertisement
ರೋಹಿಣಿ ಸತ್ಯ ಅನುವಾದಿಸಿದ ಶ್ರೀಧರ್ ಚೌಡಾರಪು ಅವರ ತೆಲುಗು ಕವಿತೆ

ರೋಹಿಣಿ ಸತ್ಯ ಅನುವಾದಿಸಿದ ಶ್ರೀಧರ್ ಚೌಡಾರಪು ಅವರ ತೆಲುಗು ಕವಿತೆ

ಜವಾನ್

ನಿಶ್ಶಬ್ದವನ್ನು ಸೀಳುತ್ತಾ
ಆಗಾಗ ಒಂದು ಗುಂಡು
ಸದ್ದಿನ ಚಪ್ಪಾಳೆಯೊಂದಿಗೆ ಮಾತನಾಡಿಸುತ್ತಿರುತ್ತದೆ
ಸರಿಹದ್ದಿನ ರೇಖೆಯಾಚಿನ ಸದ್ದಿನಲ್ಲಿ
ಏನೋ ಅನುಮಾನವು ಇಣುಕಿ ನೋಡುತ್ತಿರುತ್ತದೆ
ಅತ್ತ ಕಡೆ ಮನುಷ್ಯ ಮನುಷ್ಯನ ಹಾಗೆ ಇದ್ದರೂ
ಶತ್ರುತ್ವದ ವಾಸನೆ ಗಪ್ಪುನ ರಾಚುತ್ತೆ
ಹಗಲಿನ ಬೆಳಕಿನಲ್ಲಿ ಪ್ರಕೃತಿ ಹಗೆ ಹಿಡಿದಹಾಗೆ
ಮೃತ್ಯು ಸಂದೇಶಗಳ ಗಾಳಿಯ ಬೀಸುತ್ತಿರುತ್ತದೆ
ಬೆಳಕಿನ ಬೇಲದ ಹಣ್ಣನ್ನು ನುಂಗಿದ ಕತ್ತಲು
ಕಣ್ಣ ಮುಂದಲಿನ ಪ್ರಪಂಚವನ್ನು ಕ್ಷಣಮಾತ್ರದಲ್ಲಿ ಅಡಗಿಸಿ
ಭಯವನ್ನು ಕಾಣಿಕೆಯಾಗಿ ನೀಡುತ್ತೇನೆಂದು ಹೆದರಿಸುತ್ತಿರುತ್ತದೆ

ಆಗಾಗ ಅಲ್ಲಿ ಹಾರಾಡುವ
ಶಾಂತಿ ಕಪೋತಗಳ ರೆಕ್ಕೆಗಳ ಪಟ ಪಟ ಸದ್ದಿನ ನಡುವೆ
ಒಂಟಿತನಕ್ಕೆ ಮಂಗಳ ಹಾಡುತ್ತಾ
ಜೋಬಿನಲ್ಲಿರುವ ಮಡಿಕೆಬಿದ್ದ ಟಪಾಲಿನ ಅಕ್ಷರಗಳು
ನೆನಪಿನ ಗೀತೆಗಳನ್ನು ರಮ್ಯವಾಗಿ ಹಾಡುತ್ತಿರುತ್ತವೆ
ಯಾವಾಗಲೋ ಸಿಕ್ಕಿದ ವಿಶ್ರಾಂತಿ
ಗೆಳೆಯರ ಕೊರಳಿನ ಜೊತೆಯಾಗಿ ಸಮೂಹಗಾನವ ಮಾಡುತ್ತಾ
ಬೆಂಕಿಯ ಮುಂದೆ ನಗುವಿನ ಆನಂದ ನಾಟ್ಯವು ಮಾಡುತ್ತಿರುತ್ತದೆ
ರೇಷನ್ ಆಗಿ ಸಿಗುವ ಆಹಾರ ರುಚಿಯನ್ನು ಶುಚಿಯನ್ನು ಕಳೆದುಕೊಂಡಿದ್ದರು
ಸತ್ವವನ್ನು ನೀಡುವ ಸತ್ತ ಇದೆಯೆಂದು ಸವಾಲು ಹಾಕುತ್ತಿರುತ್ತದೆ

ಆದರೂ
ಆನಂದವಾಗೇ ಇರುತ್ತೆ ಆ ಮನಸು
ಪಟ್ಟುಹಿಡಿದು ನಿರ್ಧರಿಸಿದ ಕೆಲವು ಕಟ್ಟುಪಾಡುಗಳಿಗೆ ಬಗ್ಗಿ ಇರುತ್ತೇನೆಂದು
ಹುಟ್ಟುಪಡೆದ ಮಣ್ಣಿಗಾಗಿ ಜನ್ಮವ ನೀಡಲೂ ಸಿದ್ಧವೆಂದು ತೊಡೆ ತಟ್ಟುತ್ತದೆ
ಬಾಳನ್ನೇ ಅಡ ಇಟ್ಟ ಮೊಂಡುತನ ತನದೆನ್ನುತ್ತದೆ
ಬಂದೂಕಿನ ಗುಂಡಿಗೆ ಗುಂಡಿನಿಂದಲೋ ಗುಂಡಿಗೆಯಿಂದಲೋ
ಬದುಲು ನೀಡೋ ಎದೆಗಾರಿಕೆ ತನದೆನ್ನುತ್ತದೆ
ತಾನಿರುವವರೆಗೂ ತನ್ನ ತನುವಿರುವವರೆಗೂ
ಹಗಲಾದರು ಇರುಳಾದರೂ
ಹಗೆಯ ನೆರಳನ್ನೂ ಸರಿಹದ್ದು ದಾಟಲು ಬಿಡದ
ಜಬರ್ದಸ್ತ್ ಜಗತ್ ಜೆಟ್ಟಿ ಜವಾನ್ ನಾನು ನಾನೆನ್ನುತ್ತದೆ

 

ರೋಹಿಣಿಸತ್ಯ ಗೃಹಿಣಿ,
ತೆಲುಗಿನಲ್ಲಿ ಬರೆಯಲು ಆರಂಭಿಸಿದ್ದ ರೋಹಿಣಿಸತ್ಯ, ನಂತರ ಕನ್ನಡ ಭಾಷೆ ಕಲಿತು ಕನ್ನಡದಲ್ಲಿಯೂ ಕವನ, ಲೇಖನ, ಕಥೆಗಳನ್ನು ಬರೆಯಲಾರಂಭಿಸಿದವರು.
ಮೂರು ನಾಲ್ಕು ವರುಷಗಳಿಂದ ಎರಡು ಭಾಷೆಗಳಲ್ಲಿ ಬರವಣಿಗೆ ಮತ್ತು ಅನುವಾದ ಮಾಡುತ್ತಿದ್ದಾರೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ