Advertisement
ವಸುಂಧರಾ ಕೆ.ಎಂ. ಬರೆದ ಈ ದಿನದ ಕವಿತೆ

ವಸುಂಧರಾ ಕೆ.ಎಂ. ಬರೆದ ಈ ದಿನದ ಕವಿತೆ

ಬೇರೊಡೆದ ಮರ

ನೀ ಬರುವಾಗ, ಹಸಿರನು
ಚಿಗುರಿಸುವ ಬೇರೊಡೆದ
ಮರದಂತಿದ್ದೆ ನಾನು..

ಆಗ ಸುಖವಾಗುತ್ತಿತ್ತು ಕಂದಾ,
ನನ್ನೊಳಗೆ ನೀ ಮಿಡಿಯುವಾಗ,
ತಂತಿ ಮೀಟಿದ ವೀಣೆಯಾಗುವ
ಪುಳಕದಲಿ ನನಗೆ ಕಂಪನ…

ಪುಟ್ಟ ಮೃದುಪಾದದ ಚಿಟ್ಟೆಯೊಂದು
ಹತ್ತಿ ಬಟ್ಟೆಯನುಟ್ಟು ಎಲ್ಲಿಂದಿಲ್ಲಿಗೆ
ಹಾರಿ ಬಂತೆಂದು ಅಚ್ಚರಿಪಟ್ಟಿದ್ದೆ ..!

ನಿನ್ನನೇ ನೋಡುತ್ತಾ, ನೋಡುತ್ತಾ,
ಹಿತವಾದ ಬೆಳಕು ಚೆಲ್ಲುವ ತಾರೆಯ
ಜೋಡಿ ಕಂಗಳ ಸುಳಿಯಲಿ
ಮುಳುಗಿ, ದಣಿವರಿಯೆ ಸುತ್ತುವ
ಭುವಿಯ ಮಾರುತಮಾತೆ ನಾನಾಗಿದ್ದೆ..!

ಅನುಗಾಲದ ಸಂಭ್ರಮವ ಹೊತ್ತು
-ತಂದ ಒಲವಿನ ನಗುವೆ, ನೀ
ನನಗೆಂದಿಗೂ ಸೋಲರಿಯದ
ಜಗದ ಗೆಲುವೇ. ನೀನಿರೆ ನನ್ನೊಡನೆ
ನಾನೊಂದು ಸದಾ ಬೇರೊಡೆದು
ಚಿಗುರುವ ಹಸಿರು ಮರ…

ಮಂಡ್ಯ ಮೂಲದ ಕೆ.ಎಂ ವಸುಂಧರಾ ಬೆಂಗಳೂರು ವಾಸಿ.
ಕರ್ನಾಟಕ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮರೆತು ಬಿಟ್ಟದ್ದು’ ಇವರ ಪ್ರಕಟಿತ ಕವನ ಸಂಕಲನ.
ಬರವಣಿಗೆ,ಓದು, ಪ್ರವಾಸ, ಚಾರಣ ಇವರ ಹವ್ಯಾಸಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ