Advertisement
ವಸು ವತ್ಸಲೆ ಬರೆದ ಈ ದಿನದ ಕವಿತೆ

ವಸು ವತ್ಸಲೆ ಬರೆದ ಈ ದಿನದ ಕವಿತೆ

ಮೌನ – ಮಾತು

ಮೌನದ ಕುದಿಯೊಳಗೆ ಮಾತು
ಪುಟಕ್ಕಿಟ್ಟ ಚಿನ್ನವಾಗಬೇಕಿತ್ತು….
ಅದೇಕೋ ಅರೆ ಬೆಂದು ಬಿಸಿಯಾಗುತ್ತಾ
ನಿಗಿ ನಿಗಿ ಕೆಂಡವಾಗಿ ಕರಕಲಾಗುತ್ತಿದೆ….
ಜಿವ್ಹೆಯೊಳಗೆ ಜೀವವಿದೆ, ಕಡಿವ ಕತ್ತಿ ಇದೆ
ಬದುಕ ಕಟ್ಟುವ, ಕೆಡುವುವ ಚಮತ್ಕಾರ ಚೀತ್ಕಾರವಿದೆ….

ಅಸ್ಪಷ್ಟ ಭಾವಗಳು ಲಾವಾರಸದಂತೆ ಉಕ್ಕಿ
ಕುದಿ ಮೌನ ಈರ್ಷ್ಯೆಯಲಿ ಕಣ್ಣೊಳಗೆ ನುಂಗುತ್ತಿದೆ…
ಮುಲಾಜಿಲ್ಲದ ಮಾತು ಭಯ ಉದ್ವೇಗ ಮೀರಿ
ಬದುಕನ್ನು ಮುದ್ದಿಸುವುದ ಮರೆತು
ತಗುಲಿಕೊಂಡಿದೆ ಕ್ರೂರ ಕೋಪದ ಹರಿತ
ಕತ್ತಿಯ ತುದಿಗೆ ….

ನುಡಿದವರ ಮಾತುಗಳನ್ನೆಲ್ಲ ಒಮ್ಮೆಲೆ ಆತು ಅಕ್ಕರಕ್ಕರವನೊತ್ತಿ ಹಿಡಿದು, ಜಾಡಿಸುತಿದೆ
ಚುಚ್ಚಿ ನೋಯಿಸುವುದ ಕಲಿತು
ಪ್ರೌಢಿಮೆಯ ಕಳೆದುಕೊಂಡು ನರಳಿದೆ….
ಎಲ್ಲದರಲೂ ತಪ್ಪು ಹುಡುಕುತಾ ಮನದ
ತುಂಬ ಕಲ್ಲು ಮುಳ್ಳುಗಳ ರಾಶಿ ಗುಡ್ಡೆ ಹಾಕಿ
ತಣ್ಣಗಾದ ಮೇಲೆ ತನ್ನ ತಾನು ಶಪಿಸಿಕೊಂಡಿದೆ..

ಮಾತು ಬಾರದವನ ಮೂಕ ರೋಧನೆ
ಮಾತು ಬಲ್ಲವ ಅರಿವನೇ??
ಮನ ಬಂದಂತೆ ಮಾತು ಮಥಿಸಿ, ದ್ವೇಷವುದಿಸಿ
ವಿಷದ ಗಿಡಗಳನೆಟ್ಟು, ಫಲ ಪಡೆಯುತಾ…
ಮಾತು ಆಡಿದಷ್ಟು ಕಳೆದುಕೊಂಡದ್ದೇ ಹೆಚ್ಚು
ಮೌನವಿದ್ದಷ್ಟು ರಸಚ್ಯುತಿಗೆ ಅವಕಾಶವಿಲ್ಲ….
ಮಾತ ಮರೆತು ಒಂದಷ್ಟು ಹೊತ್ತು ಮೌನ ರುಚಿಸೋಣ!!!!!

ವಸು ವತ್ಸಲೆ ಮೂಲತಃ ಹಾಸನ ಜಿಲ್ಲೆಯವಳು.
ಬೆಂಗಳೂರಿನಲ್ಲಿ ನೆಲಸಿರುವ ಇವರು ವೃತ್ತಿಯಲ್ಲಿ ಶಿಕ್ಷಕಿ.
ಇವರ “ಭಾವಸುಧಾ”, ಮತ್ತೆರೆಡು ಕವನ ಸಂಕಲನ, ಕಥಾ ಸಂಕಲನ, ೬ ಭಾವಗೀತೆಗಳ ಸಂಕಲನ, ೫ ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ