Advertisement
ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

ಒಂದಿಡೀ ಹಗಲು

ಒಂದಿಡೀ ಹಗಲು ಬೇಕಿತ್ತು
ಅಮ್ಮನ ಗರ್ಭದಲ್ಲಿ ಬೆಚ್ಚಗೆ
ಕೈಕಾಲು ಮಡಿಸಿ ಮಲಗಿದಂತೆ
ನಿದ್ರಿಸಿಬಿಡಬೇಕಿತ್ತು …

ಹಕ್ಕಿಹಾಡಿಗೆ ಹೂಹೊರಳಿಗೆ
ಬೇಲಿಯ ಮುಳ್ಳುಕಂಟಿಗಳಿಗೆ
ನೀರವಕ್ಕೆ ನದಿಗೆ ಕಡಲಿಗೆ
ಕಿವುಡಾಗಿ ಕುರುಡಾಗಿ ಮೂಕಾಗಿ
ನಿದ್ರಿಸಿಬಿಡಬೇಕಿತ್ತು

ಬರುವವರು ಹೋದವರು
ಅಳುವವರು ನಗುವವರು
ಕಾಲೆಳೆವವರು ಕತ್ತುಸೀಳುವವರು
ನರಕದವರು ಸ್ವರ್ಗದವರು
ನೆಗೆದುಬಿದ್ದಳೆಂದು ಖುಷಿಪಡುವಷ್ಟು
ನಿದ್ರಿಸಿಬಿಡಬೇಕಿತ್ತು

ಬಣ್ಣಗಳ ಹಾಸಿ ಹೊದ್ದು
ರೇಖೆ ಕನಸುಗಳ ಬಿಡಿಸುತ್ತ
ಸುಪ್ತಮನಸಿನ ಅಯೋಮಯ
– ಗಳಲ್ಲಿ ನಾನ್ಯಾರು ನೀನ್ಯಾರೆಂದು
ಜಪ್ತಿಗೆ ಬರದಂತೆ …..
ನಿದ್ರಿಸಿಬಿಡಬೇಕಿತ್ತು !

About The Author

ವಿಜಯಶ್ರೀ ಹಾಲಾಡಿ

ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು

1 Comment

  1. ಸುಬ್ರಹ್ಮಣ್ಯ ಶೆಟ್ಟಿ

    ಚೆನ್ನಾಗಿದೆ🙏

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ