Advertisement
ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ

ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ

ಕವಿತೆಯಾಗಿಸಲೇ ಬೇಕು

ಹೂವಿನ ಕಥೆಯನ್ನು ಹೇಳುವಾಗ
ಹಾದುಹೋಗುವ ದುಂಬಿಗಳು
ಅವು ಹೀರುವ ಮಧುವನ್ನು
ಕವಿತೆಯಾಗಿಸಲೇ ಬೇಕು

ಕಡಲಿನ ಕಥೆಯನ್ನು ಹೇಳುವಾಗ
ಅಲೆಗಳ ಮೌನವನ್ನು
ಅವು ಹೊತ್ತು ತರುವ ಹುಕಿಯನ್ನು
ಕವಿತೆಯಾಗಿಸಲೇ ಬೇಕು

ಹಸಿವು, ಸಾಲು ಕೊಲೆ, ಅತ್ಯಾಚಾರದ ಕಥೆಗಳನ್ನು ಹೇಳುವಾಗ
ಹಿಂದೆ ಕಮರಿದ ಕನಸನ್ನು ಕವಿತೆಯಾಗಿಸಲೇ ಬೇಕು

ಊರಿನ ಕಥೆಯನ್ನು ಹೇಳುವಾಗ
ನಾಯಕನ ತೆವಲನ್ನು
ಅವನು ನುಂಗುವ ಸತ್ಯವನ್ನು
ಕವಿತೆಯಾಗಿಸಲೇ ಬೇಕು

ಭೂಮಿ ಕಥೆಯನ್ನು ಹೇಳುವಾಗ
ಚಂದ್ರನ ಸುಂದರ ಗುಲಾಮಿಯನ್ನು
ಅವನ ಮುಖದ ಸುಕ್ಕುಗಳನ್ನು
ಕವಿತೆಯಾಗಿಸಲೇ ಬೇಕು…..

ಈ ಲೋಕದ ಯಾವುದೇ ಬಗೆಯ ಕಥೆಯನ್ನು ಹೇಳುವಾಗ
ಆಳದಲ್ಲಿ ಹಿಸುಕಲ್ಪಟ್ಟಿರುವ ಧ್ವನಿಯನ್ನು ಕವಿತೆಯಾಗಿಸಲೇ ಬೇಕು

ವಿಶಾಲ್ ಮ್ಯಾಸರ್ ಹೊಸಪೇಟೆಯವರು
ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ
“ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. ನಾಗರಾಜ

    ವಿಶಾಲ ತುಂಬಾ ಚೆಂದದ ಕವಿತೆ..

    Reply
  2. PRAVEEN DAIVAJNACHARYA

    ನಾನು ಮತ್ತೆ ಮತ್ತೆ ಓದಿಕೊಂಡ ಹಾಗೂ ನೇರ ಎದೆಗೆ ಇಳಿದ ಕವಿತೆಗಳಲ್ಲಿ ಇದೂ ಒಂದು.

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ