Advertisement
ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ

ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ

ಹೆಚ್ಚಾನು ಹೆಚ್ಚು ಮಾತುಗಳಿಗೆ
ಮೌನದಲ್ಲಿ ಕತ್ತು ಹಿಸುಕುತ್ತದೆ
ಉಸಿರು

ಸತ್ತೇ ಬಿಡುವ ರೋಗಿಯೊಬ್ಬನಿಗೆ
ಬದುಕಲಿಕ್ಕೆ ಅದೆಷ್ಟು ಆಸೆ…?
ಕಣ್ಣಲ್ಲಿ ಅದೆಂತಾ ಕನಸು…?

ಓಮ್ಮೆ ಸಾಯಬೇಕು
ಮತ್ತೊಮ್ಮೆ ಬದುಕಬೇಕು
ಕನಿಷ್ಠ ಈ ಹೊತ್ತಿಗೆ ನಿದ್ರೆ ಬಂದರಷ್ಟೇ ಸಾಕು…!

ಅದೆಷ್ಟು ಮುದ್ದಾಮು
ಆ ಕ್ಷಣಕ್ಕೆ ಸುಮ್ಮನಿರುವುದು

ಎಲ್ಲೆಂದರಲ್ಲಿ ರೋಡಿನಲ್ಲಿ ಈ ನಾಯಿಗಳಿಗೆ ಹೆರಿಗೆಯಾಗುತ್ತದೆ
ನಾರ್ಮಲ್ಲೋ, ಸಿಸೇರಿಯನ್ನೋ
ಯಾವುದೋ ಒಂದು

ಯಪ್ಪಾ ದೇವರೇ!
ಕನಿಷ್ಠ ಶಿಸ್ತು ಇಲ್ಲದೇ ಎಂಗೆಂಗೋ ಬದುಕಿದರೆ
ಸೇಡು ತೀರಿಸಿಕೊಳ್ಳತ್ತದೆ ಸಾವು
ಬರಬರಾದ್ದನ್ನು ಬರಿಸಿ

ನೀವು ಕೇಳಬಹುದು
ಮಾತಿಗೂ ಮೌನಕ್ಕು
ಬೀದಿಯಲ್ಲಿ ಹುಟ್ಟುವ ನಾಯಿಗೂ
ಆಪರೇಷನ್ನಿಗೂ ಯಾವ ಸಂಬಂಧ
ಹೌದು ಸಾವಿಗೂ ಬದುಕಿಗೂ ಏನು ಸಂಬಂಧ?

ವಿಶಾಲ್ ಮ್ಯಾಸರ್ ಹೊಸಪೇಟೆಯವರು
ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ
“ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ