Advertisement
ಶರತ್ ಪಿ.ಕೆ. ಬರೆದ ಹೊಸ ಕವಿತೆ

ಶರತ್ ಪಿ.ಕೆ. ಬರೆದ ಹೊಸ ಕವಿತೆ

ಜಯಂತ ಕಾಯ್ಕಿಣಿ ಮತ್ತು ಪಾಟಿಚೀಲ

ಜಯಂತರು ಎಲ್ಲಿ ಹೋದರೂ ತಮ್ಮೊಡನೆ ಒಂದು ಪಾಟಿಚೀಲವೊಂದನ್ನು ಕೊಂಡೊಯ್ಯುತ್ತಾರೆ.
ಅದರೊಳಗೆ ಏನಿರಬಹುದು?
ಕಲ್ಲು ಸಕ್ಕರೆಯೋ ಅಥವಾ ಒಂದು ಜಿಲೇಬಿಯೋ ಎಂದು
ನನಗೆ ಯಾವಾಗಲೂ ಕುತೂಹಲ ಕಾಡುತ್ತದೆ.

ತೊದಲು ಮಾತಿನ ಪುಟ್ಟ ಮಗು,
ತನ್ನ ಸುತ್ತಮುತ್ತಲಿನ ಎಲ್ಲಾ ಚರಾಚರಗಳೊಂದಿಗೆ ಸಹಜವಾಗಿ
ಸಂಭಾಷಣೆಗೆ ತೊಡಗುವಂತೆ,
ಬದುಕಿಗೆ ತನ್ನ ಭಾವಕೋಶವನ್ನು ತೆರೆದು ಕುಳಿತಿರುವಂತೆ ಚಿತ್ರ ಮೂಡುತ್ತದೆ.

ಜಗತ್ತನ್ನೆ ತನ್ನ ಜೋಳಿಗೆಯಲ್ಲಿಟ್ಟುಕೊಂಡು ತಿರುಗುವ ಸಂತನಂತೆ, ಎದುರಿಗಿರುವವರ
ಎದೆ ಬಡಿತದ‌ ಏರಿಳಿತದ ಸದ್ದಿಗೆ
ಕಿವಿಯಾಗಿ ಸಂವೇದನೆಯನ್ನು ಅಳೆಯುತ್ತಾ ಅಲೆಯುತ್ತಿರುವಂತೆ ಭಾಸವಾಗುತ್ತದೆ.

ಕುತೂಹಲದ ಕಣ್ಣಿನ ಶಾಲಾ ಬಾಲಕನಂತೆ
ಆಗಾಗ ಪಾಟಿ ಚೀಲದಲ್ಲಿನ
ಸ್ಲೇಟನ್ನು ಹೊರತೆಗೆದು ಗೀಚಿ, ಬರೆದು, ಅಳಿಸಿ, ತಿದ್ದಿ, ತೀಡಿ, ಬೇಕಾದಂತೆ ಬದುಕಿಗೆ
ಬಣ್ಣ ತುಂಬಿದಂತೆ ರಂಜಿಸಿದಂತೆ ಸ್ವಪ್ನ ಬೀಳುತ್ತದೆ.‌

 

ಶರತ್ ಪಿ.ಕೆ. ಹಾಸನದವರು.
ನಗರ ಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ಗುಂಪಿಗೆ ಸೇರದ ಪದಗಳು” ಇವರ ಪ್ರಕಟಿತ ಕವನ ಸಂಕಲನ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ