Advertisement
ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

ಆ ನದಿಯು ಮತ್ತು ಈ ದಾದಿಯು..

ಎಲ್ಲಾ ತಿಳಿದ ಆ ಪ್ರಜ್ಞ ಮುನಿಯೇಕೆ
ನೀಡಿದ ವರಗಳನು
ಅರಿಯದ ಹಸಿ ತರುಣಿಗೆ

ಸೂರ್ಯನೇಕೆ ಓಡಿ ಬಂದ
ಬರೀ ಅವಳ ಒಂದು ಸ್ವರಕೆ
ಅವಳ ಮೈತುಂಬಲು

ಇಬ್ಬರೂ ಸೇರಿಯೇಕೆ ಹಡೆಸಿದರಿ
ಒಲ್ಲದ
ಸಂತಾನವನು ಎಳೆ ಹುಡುಗಿಯ
ಒಡಲಿಂದ..

ಅವಳನ್ನು ಲೋಕ ಆಡಿಕೊಳ್ಳುತ್ತಿದೆ
ನೀವೇಕೆ ಕಟಕಟೆಯಲಿ
ಬಂದು ನಿಂತಿಲ್ಲ..

ಎಳೆಗೂಸನು ದಡ ಸೇರಿಸಿದ
ನದಿಯ ಕುರಿತು ಯಾಕೆ ಯಾರೂ
ಚರ್ಚಿಸಲಿಲ್ಲ..

ಇಲ್ಲಿ ಸರ್ಕಾರಿ ಆಸ್ಪತ್ರೆಯ ದಾದಿಯ
ಮೇಲೆ ದೂರೊಂದು ದಾಖಲಾಗಿದೆ

ಕಟಕಟೆಯಲಿ ನಿಲ್ಲಬೇಕಾದವರು
ಅಲ್ಲೆಲ್ಲೊ ಮೀಸೆ ತಿರುವುತ್ತಿದ್ದಾರೆ

ತರುಣಿಯ ಹೆಸರು ಬೀದಿ ಬೀದಿ
ಅಲೆಯುತ್ತಿದೆ

ಆ ಮುನಿ ಆ ಸೂರ್ಯ ಇಲ್ಲೆ ಎಲ್ಲೊ
ಜೀವಿಸಿದ್ದಾರೆ ಹಿಡಿದು ಶಿಕ್ಷಿಸಿ

ವರಗಳು ಇನ್ನೂ ಜೀವಿಸಿರಬಹುದು
ಎಲ್ಲಾದರೂ ಸಿಕ್ಕರೆ ಕತ್ತು ಹಿಸುಕಿ

ಕರುಣಾಮಯಿ ದಾದಿಗೊಂದು
ಬೇಲ್ ಬೇಕಿದೆ ಯಾರಾದರೂ ಸಹಕರಿಸಿ..

About The Author

ಸದಾಶಿವ ಸೊರಟೂರು

ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು  ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಹೆಸರಿಲ್ಲದ ಬಯಲು' ಮತ್ತು ' ತೂತು ಬಿದ್ದ ಚಂದಿರ' (ಕವನ ಸಂಕಲನ)  ಹಾಗೂ  ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ