೧. ನಾವಿಬ್ಬರು ಒಬ್ಬರನೊಬ್ಬರು ತಾಕದೇ
ನಾವಿಬ್ಬರು ಒಬ್ಬರನೊಬ್ಬರು ತಾಕದೇ
ಎಲ್ಲಿಗೋ ಹಾದು ಹೋಗುವಾಗ
ಅದೇ ನೆಪದಲ್ಲಿ ಅಲ್ಲಿಯೇ
ಮುಖಾಮುಖಿಯಾಗಿ ಕೂತು
ಬೆಳಗೇ ರಾತ್ರಿಯಾಗಿ ಒಲಿದು
ಸೇರಲೊಂದು ನಭವು ಸಿಕ್ಕು
ಅರಿತ ಮೌನ ಒಪ್ಪಿಗೆಯಂತೆ
ಬೆರೆತ ಬಣ್ಣದ ನಗುವ ನಕ್ಕು
ಹೊರಗೆಲ್ಲೋ ನೀ ತಾಕದೆ
ಹೋದ ಶಬ್ದಕ್ಕೆ ನಾ ಕಾದ
ಮಾರನೇದಿನ ನೀ ತಾಕಿದ
ಜುಮ್ಮಿಗೆ ಕಣ್ಣರಳಿಸಿದ್ದ ನೆನೆಸಿ
ನನ್ನೊಳಗೆ ಹ್ರಸ್ವವಾಗಿ ಕೂಡಿದ್ದು
ನೀ ಸಿಕ್ಕು ದೀರ್ಘವಾಗಿ
ಪದದ ಸಲುಗೆಯೇ ಪ್ರೇಮವಾಗಿ
ಕಲಿತ ಹಾಡೆಲ್ಲಾ ನಿನಗೆ ಹಾಡಿ
ಒಪ್ಪಿಸುವುದೆಲ್ಲ ಆದ ಮೇಲೆ
ಪರದೆಯಲ್ಲಿ ಜಾಗವಿರದೆ
ಒಳಗು ಕೂಡ ತುಂಬಿ ಬಂದ
ಮಾತನೆಲ್ಲಾ ಹೇಳ ಕೊಡದೆ
ಇಳಿದು ಹೋದ ಬಿಸಿಯ ಹನಿಗೆ
ಆಳ ಶಬ್ದ ನೆಪವ ಕೊಟ್ಟು
ಭಾವ ಸೆಣಸಿ ಮಳೆಯು ಒಡೆದು
ಒಲುಮೆಯುಳಿದು ತಂಪಾದದ್ದು
ಯಾರು?
೨. ಜ್ವರದ ನೆಪಕೆ…
ಮಣಿಪಾಲದಲ್ಲಿರುವ ಸುಷ್ಮಿತಾ ಶೆಟ್ಟಿ ಓದಿದ್ದು ಪತ್ರಿಕೋದ್ಯಮ. ಸಾಹಿತ್ಯದಲ್ಲಿ ಆಸಕ್ತಿ ಮತ್ತು ಸಾಹಿತ್ಯ ಸಂಶೋಧನಾ ವಿದ್ಯಾರ್ಥಿ.
(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ