Advertisement
ಸ್ವಪ್ನಾ ಶಶಿಧರ ಭಟ್ಟ ಬರೆದ ಈ ದಿನದ ಕವಿತೆ

ಸ್ವಪ್ನಾ ಶಶಿಧರ ಭಟ್ಟ ಬರೆದ ಈ ದಿನದ ಕವಿತೆ

ಗೋಡೆ..
ನಕ್ಷತ್ರಗಳು ಮಿನುಗುತ್ತವೆ,
ನಗುತ್ತಿವೆಯೋ… ಹೇಳಲಾಗದು..
ತಲೆಯ ಮೇಲಿನ ಛಾವಣಿ ಭದ್ರವಾಗಿದೆ,
ನಕ್ಕರು ಕಣ್ಣು ಕಾಣಲಾಗದು..
ದಿನ ಮುಗಿದ ನಂತರ
ಧಾವಂತಗಳೆಲ್ಲ
ಮುಸುಕೆಳೆಯಹೊರಟಿವೆ..
ನಿರೀಕ್ಷೆಗಳು ಮಾತ್ರ,
ಬೆಳಕಾದೀತೆಂದು ಕಾದು ಕೂತಿವೆ..
ಕರ್ತವ್ಯಪರತೆ ಏನನ್ನೂ
ಮರೆಯಗೊಡುವುದಿಲ್ಲ..
ಯಂತ್ರದಂತೆ ಎಲ್ಲವನ್ನೂ ಮಾಡಿಸುತ್ತದೆ..
ಮಾರ್ಗಶಿರದ ಶುಷ್ಕತೆ
ಮಾತು ಕೃತಿಗಳಲ್ಲಿ
ಧ್ವನಿಸುತ್ತದೆ.
ಗಳಿಸಿಯೂ, ಉಳಿಸಿಯೂ
ಎಲ್ಲ ನಿರರ್ಥ,
ಪ್ರೀತಿ ಬರಡಾದ ಸಂಬಂಧಗಳು
ಕರ್ತವ್ಯ ಲೋಪವಾಗದಂತೆ
ಎಚ್ಚರ ವಹಿಸುತ್ತವೆ.
ಎಲ್ಲ ಮುಗಿದ ಕೊನೆಗೊಂದು
ದೀರ್ಘ ನಿಟ್ಟುಸಿರು,
ಗಳಿಸಲಾರದ್ದಕ್ಕಾಗಿ..
ಅಸಾಮ್ಯ ಸಂಬಂಧಗಳ
ಅಂತರಕಾಯ್ವ ಗೋಡೆಗಳು
ಬಲವಾಗುತ್ತವೆ..
ಅಭಿಮಾನದ ಇಟ್ಟಿಗೆಗಳಿಂದ.
ಸ್ವಪ್ನಾ ಶಶಿಧರ ಭಟ್ಟ ಮೂಲತಃ ತೀರ್ಥಹಳ್ಳಿಯವರು.
ಹಿಂದಿ ಮತ್ತು ಕನ್ನಡ ಸ್ನಾತಕೋತ್ತರ ಪದವೀಧರೆ.
ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ