Advertisement
ಹೆಚ್.ಆರ್.ಸುಜಾತಾ ಬರೆದ ದಿನದ ಕವಿತೆ

ಹೆಚ್.ಆರ್.ಸುಜಾತಾ ಬರೆದ ದಿನದ ಕವಿತೆ

ಅಣಿ ಮುತ್ತು

ಬಿಡದೆ ಬೆನ್ನಲ್ಲಿ ಹೊತ್ತೆ
ಕೂಸುಮರಿ
ನೀನೊಂದು ಮಗು

ತಿರುಳುಗಣ್ಣಿನ ಬೆಳಕು
ಜೋತು ಹಿಡಿದು
ಜೊಂಪೆಗೂದಲ

ಕಿತ್ತುಕೊಳ್ಳದಂತೆ
ಎದೆಯಲ್ಲಿ
ನೆಟ್ಟುಗಣ್ಣಿನ ನೋಟ.

ತೀರದ ಬಯಕೆ
ಹೆಪ್ಪಿಟ್ಟ ಒಂದೇ ಒಂದು
ಮುತ್ತಿನ ಹನಿ,

ಬೆಣ್ಣೆಯಂತರಳಿತು ತನು.
ಎಷ್ಟೊಂದು ಪತ್ರಗಳ ಹುಟ್ಟು
ಬಂದಿಳಿ ರೆಕ್ಕೆಯಲಿ

ಗರಿಗರಿಗನಸು
ಬಾನಾಡಿ
ಬಾನತುಂಬಿ

ಶುರುವಾದ ಮೆರವಣಿಗೆ,
ಕಾಣುತ್ತಿರಲಿ
ಕಣ್ ಸೋಲುವನಕ.

 

 

 

 

 

 

 

ಆಡಲಾರದ ಭಾವ
ಹಾಡತೊಡಗಿ
ದಾರಿಸಾಗಲಿ ರಾಗದಲಿ.

ನೀಲಿ ಕಡಲ ಬಾನಲ್ಲಿ
ಬೆಣ್ಣೆಮುದ್ದು ತೇಲಿ
ಕಣ್ಣಕನ್ನಡಿಯಲಿ ಈಜಿ ಮುತ್ತಿಟ್ಟ

ಚಂದ್ರ ಬಿಂಬ ಸೊಕ್ಕಿ
ಮಜ್ಜಿಗೆಯು ತುಳುಕಿ
ಬೆಳದಿಂಗಳೋ ನೆಲತುಂಬ

ಉಸಿರುಸುರಿಗೂ ಬಿರುಸು
ತಣಿಸುವ ಮತ್ತು
ಎಂಥ ಚಂದ!

ಅಣಿಮುತ್ತುದುರಿ ದಾರಿಯಲಿ
ಮಾಲೆಯಗರಳಿ
ಬೆಟ್ಟತುದಿಯಲ್ಲಿ

ಬಚ್ಚಿಟ್ಟ ಸೆರಗಗಂಟು
ತೂಗುಬಿದ್ದಿದೆ ಹೂವಾಗಿ
ಗಾಳಿ ಹಾಡುವಲ್ಲಿ

 

ಹೆಚ್.ಆರ್.ಸುಜಾತಾ. ಕವಯಿತ್ರಿ, ಪತ್ರಕರ್ತೆ ಹಾಗೂ ಅಂಕಣಗಾರ್ತಿ.
‘ನೀಲಿ ಮೂಗಿನ ನತ್ತು ‘ ಇವರ ಪ್ರಬಂಧಗಳ ಸಂಕಲನ.
ಮಕ್ಕಳ ರಂಗಭೂಮಿಯಲ್ಲಿ ಕೂಡ ಕೆಲಸ ಮಾಡಿದ ಅನುಭವ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ