Advertisement

Month: January 2025

ಸೌಮ್ಯಶ್ರೀ ಎ ಎಸ್ ಬರೆದ ಈ ದಿನದ ಕವಿತೆ

“ಖಾಲಿಯಾದ ಹರಿವಾಣಕ್ಕೆ ಇರುಳು ಜಾರುವ ಮುನ್ನ
ಹಸಿವು ನೀಗಿಸುವಷ್ಟು ಬೆಳಕ ತುಂಬಿಸಿಕೊಳ್ಳುವ ಕಾತರ
ಪುಟ್ಟ ಪೋರನಿಂದ ಇಳಿ ವಯಸ್ಸಿನವರೆಗೂ
ಹಸಿವಿನ ಅಳುವ ಮರೆಸಿ ನಗುವ
ಮೆರೆಸುವ ಪ್ರತಿ ಕ್ಷಣದ ಹೋರಾಟ”- ಸೌಮ್ಯಶ್ರೀ ಎ ಎಸ್ ಬರೆದ ಈ ದಿನದ ಕವಿತೆ

Read More

ಕೀವೀ ನಾಡಲ್ಲಿ ಕ್ಯಾಂಪರ್ ವ್ಯಾನ್ ಸುತ್ತಾಟ: ವಿನತೆ ಶರ್ಮ ಅಂಕಣ

ಈಚೀಚೆಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ತೆಗೆದುಕೊಂಡು ಪ್ರವಾಸ ಮಾಡುವ ಭಾರತೀಯರು/ಏಷ್ಯನ್ನರು ಹೆಚ್ಚಾಗುತ್ತಿದ್ದಾರೆ. ನಾನು ಕೇಳಿದಂತೆ ಹೀಗೆ ಕ್ಯಾಂಪರ್ ವ್ಯಾನ್ ಬಾಡಿಗೆಗೆ ಪಡೆದು ಪ್ರವಾಸ ಮಾಡುವ ಭಾರತೀಯರು ಒಳ್ಳೆ ಸಿದ್ಧತೆ ಮಾಡಿಕೊಂಡಿರುತ್ತಾರೆ. ಪ್ರತಿದಿನವೂ ಅಡುಗೆ ಮಾಡಲು ಬೇಕಾಗುವ ದಿನಸಿ ಸಾಮಗ್ರಿಯಿಂದ ಹಿಡಿದು ದಿನನಿತ್ಯದ ಕಾರ್ಯಕ್ರಮದ ವೇಳಾಪಟ್ಟಿಯನ್ನೂ ಹೊಂದಿಸಿಕೊಂಡಿರುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಾಡೆಲಿಂಗ್ ಕ್ಷೇತ್ರದೆಡೆಗೆ ಒಂದು ಸ್ತ್ರೀನೋಟ: ಡಾ.ಎಲ್.ಜಿ.ಮೀರಾ ಅಂಕಣ

ಶೇವಿಂಗ್ ಬ್ಲೇಡ್‌ನಿಂದ ಹಿಡಿದು ದುಬಾರಿ ಕಾರುಗಳ ತನಕ ನೂರಾರು ಉತ್ಪನ್ನಗಳ ಮಾರಾಟಕ್ಕೆ ಹೆಣ್ಣಿನ `ಸುಂದರ’ ದೇಹದ ಪ್ರದರ್ಶನ ಅನಿವಾರ್ಯವಾಗಿಬಿಟ್ಟಿದೆ. ಈ ನಡುವೆ ಜಾಹೀರಾತುಗಳು ವಿದ್ಯಾವಂತ ಹಾಗೂ ತನ್ನ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ತ್ರೀಯನ್ನು ಆಗೀಗ ತೋರಿಸುತ್ತವಾದರೂ ಸೌಂದರ್ಯದ ಸೀಮಿತ ಕಲ್ಪನೆಯನ್ನೇ ಇವು ಮುಂದು ಮಾಡುತ್ತವೆ ಎಂಬುದು ಸತ್ಯ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಏಳನೆಯ ಬರಹ

Read More

ದೊಡ್ಡಬೊಮ್ಮಸಂದ್ರ ಪುರ ಪ್ರವೇಶ: ಎಚ್. ಗೋಪಾಲಕೃಷ್ಣ ಸರಣಿ

ಅಲ್ಲೊಂದು ಮೂಲೆಯಲ್ಲಿ ತೆಂಗಿನ ತಡಿಕೆ, ಸೊಂಟದಷ್ಟು ಎತ್ತರ. ಒಳಗಡೆ ಒಂದು ಗಂಡಸು. ಉರಿಯುತ್ತಿರುವ ಸೀಮೆ ಎಣ್ಣೆ ಸ್ಟೋವು. ಆಗ ಒಂದು ಕಡೆ ಸೀಮೆ ಎಣ್ಣೆ ತುಂಬಲು ಒಂದು ಸಿಲಿಂಡರ್ ಆಕಾರದ ಡಬ್ಬ ಮತ್ತು ಅದಕ್ಕೆ ಅಂಟಿದ ಹಾಗೆ ಸೀಮೆ ಎಣ್ಣೆ ಉರಿಯ ಬರ್ನರ್ ಇರುವ ಒಲೆ ತುಂಬಾ ಪಾಪ್ಯುಲರ್. ಅದರ ಮೇಲೆ ಒಂದು ಬಾಂಡಲಿ ಮತ್ತು ಕುದಿ ಎಣ್ಣೆ ಒಳಗೆ ಬೋಂಡಾ. ಒಬ್ಬ ಸ್ಟೋವಿನ ಆಕಡೆ ಕೂತು ಕೈಯಲ್ಲಿ ಪುಟ್ಟ ಜಾಲರಿ ಸೌಟು ಹಿಡಿದು ಕೂತು ಬೋಂಡಾ ಕರೀತಾ ಕೂತಿದ್ದಾನೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಮೊಮ್ಮಕ್ಕಳಿಂದ ಕಲಿಯುವುದು: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಮಕ್ಕಳನ್ನು ಪ್ರಬುದ್ಧರನ್ನಾಗಿ ಮಾಡುವ ನಮ್ಮ ಆತುರದಲ್ಲಿ ಅವರ ಬಾಲ್ಯದ ಸಂತೋಷಕ್ಕೆ ನಾವು ಅಡ್ಡ ಬರಬಾರದಷ್ಟೇ. ಈ ಎಚ್ಚರ ನನಗೆ ಯಾವಾಗಲೂ ಇತ್ತು. ನನಗೆ ಎಚ್ಚರವಿಲ್ಲದಿದ್ದರೂ ಏನೂ ತೊಂದರೆ ಆಗುತ್ತಿರಲಿಲ್ಲ. ಏಕೆಂದರೆ, ಅವನು ಪುಸ್ತಕಗಳಿಗಿಂತ ಹೆಚ್ಚಾಗಿ ತನ್ನ ವಯಸ್ಸಿನ ಮಕ್ಕಳ ಜೊತೆ ಬೆರೆಯುವುದನ್ನೇ, ಅವರೊಡನೆ ಆಟವಾಡುವುದನ್ನೇ ತುಂಬಾ ಇಷ್ಟಪಡುತ್ತಿದ್ದ. ದಣಿಯುವ ತನಕ ಅಡುತ್ತಿದ್ದ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹತ್ತನೆಯ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ