Advertisement

Month: January 2025

ಭೂಮ್ತಾಯಿ ಮ್ಯಾಗ್ಳ ಗಿಡ ಗಂಟಿ ಬುಟ್ರೆ ದಿಷ್ಟಿ ನಿವಾಳ್ಸೋದೇ ದೊಡ್ಡ ಮದ್ದು: ಸುಮಾ ಸತೀಶ್ ಸರಣಿ

ನಾವು ಉಣ್ಣಾವಾಗ ಒಂದು ಕಡಿಕ್ಕೆ ಕುಂತು ಉಂಡು, ಗೋಮೆ ಇಕ್ಕಿ ಎದ್ದೇಳ್ ಬೇಕು. ಅದ್ ಬುಟ್ಟಿ ಓಡಾಡೋ ಜಾಗದಾಗೆ ಉಂಡ್ರೆ, ತಟ್ಟೆಗ್ಳಾಗಿಂದ ಮುಸ್ರೆ ಪಸ್ರೆ ಚೆಲ್ಲಾಕಿಲ್ವೇ? ಅದುನ್ನ ಯಾರಾನಾ ತುಳುದ್ರೆ ಕಾಲ ರಂಜು ಆಗ್ತೈತೆ ಅಂತಿದ್ರು. ಭೂಮ್ತಾಯಿ ಕೊಡಾ ಅನ್ನವಾ ಅಂಗೆ ಮರ್ವಾದೆ ಇಲ್ದಂಗೆ ಚೆಲ್ಲೀರೆ, ಅದ್ನ ತುಳ್ದು ಪಳ್ದು ಮಾಡೀರೆ ನಮ್ಗೆ ಒಳ್ಳೇದಾಯ್ತೈತೆ? ಅಂಬೋರು. ಇದೂ ಒಂತರಾ ದಿಟವೇಯಾ. ಕಿಲೀನ್ ಆಗಿರ್ಬೇಕು ಅಂಬ್ತ ಪಾಠ ಹೇಳ್ತೈತೆ. ಭೂಮ್ತಾಯಿ ಕೊಡಾ ಪ್ರಸಾದ್ವ ಚೆಲ್ಬಾರ್ದು ಅಂತ್ಲೂ ಹೇಳ್ತೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಮದ್ದುಗಳ ಕುರಿತ ಬರಹ ನಿಮ್ಮ ಓದಿಗೆ

Read More

ಧರ್ಮ ತೊಡಕು ಮತ್ತು ಬೆಳಕು: ರಂಜಾನ್ ದರ್ಗಾ ಸರಣಿ

ಸಮಾಜದಲ್ಲಿ ವಿಚಾರವಾದದ ಬೆಳವಣಿಗೆಯಿಂದ ಮಾತ್ರವೇ ನವಸಮಾಜದ ನಿರ್ಮಾಣವಾಗಲು ಸಾಧ್ಯ. ಎಲ್ಲ ಧರ್ಮಗಳನ್ನು ವಿಚಾರವಾದದ ಒರೆಗಲ್ಲಿಗೆ ಹಚ್ಚದಿದ್ದರೆ ಮಾನವಕುಲ ಇನ್ನೂ ಅಧೋಗತಿಗೆ ಹೋಗುವುದು. ಧರ್ಮಗಳ ತಿರಸ್ಕಾರದಿಂದ ವಿಚಾರವಾದಿಗಳು ಇದನ್ನು ಸಾಧಿಸಲಿಕ್ಕಾಗದು. ಧರ್ಮಗಳಲ್ಲಿನ ಅರಿವಿನ ಬೆಳಕಿನೊಂದಿಗೆ ಮಾತ್ರ ಈ ವಿಚಾರಹೀನ ಸ್ಥಿತಿಯಿಂದ ಹೊರಬರಲು ಸಾಧ್ಯ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 94ನೇ ಕಂತು ನಿಮ್ಮ ಓದಿಗೆ

Read More

ಅನಿಲ್‌ ಗುನ್ನಾಪೂರ ಬರೆದ ಈ ಭಾನುವಾರದ ಕತೆ

ದಿನಪತ್ರಿಕೆ ಓದುತ್ತ ಕುಳಿತಿದ್ದವನೊಬ್ಬ ‘ಅಲ್ರೀ ಅವ್ರಿಗೆ ಕೆಲಸ ಮಾಡ್ರಿ ಅಂತೀರಿ.. ಕೆಲಸ ಯಾರು ಕೊಡ್ತರ‍್ರಿ? ನೋಡಿದ್ರಲಾ ಮ್ಯಾಲ್ ಮಲಗಿದ್ದ ಸಾಹೇಬ್ರು ಬರಿ ಮುಟ್ಟಿದ್ರೆ ಹೆಂಗ್ ಹೊಡ್ದು ಕಳಸಿದ್ರು’ ಎಂದು ಮತ್ತೆ ದಿನಪತ್ರಿಕೆ ಓದುವುದರಲ್ಲಿ ಮಗ್ನನಾದ. ನಂತರದಲ್ಲಿ ಯಾರೂ ಏನೂ ಎನ್ನದೇ ತಮ್ಮ ಪಾಡಿಗೆ ತಾವು ಕುಳಿತರು. ಅವಳಿಗೆ ಹಾಗೆ ಹೊಡೆಯಬಾರದಿತ್ತೆನಿಸಿ, ನನ್ನ ಮೇಲೆ ನನಗೇ ಸಿಟ್ಟು ಬಂತು. ಅಕಸ್ಮಾತ್ ಅವಳು ತಿರುಗಿ ಹೊಡೆದಿದ್ದರೆ?
ಅನಿಲ್‌ ಗುನ್ನಾಪೂರ ಹೊಸ ಕಥಾ ಸಂಕಲನ “ಸರ್ವೇ ನಂಬರ್-‌೯೭” ದ “ಗೋಲ್‌ಗುಂಬಜ್ ಎಕ್ಸ್‌ಪ್ರೆಸ್‌” ಕತೆ ನಿಮ್ಮ ಓದಿಗೆ

Read More

ಪ್ರಾಣಪಕ್ಷಿಗಳು ಹಾರಿಹೋದವು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕೊನೆಗೆ ರಾತ್ರಿ 12 ಗಂಟೆಗೆ ಯೂನಿಫಾರ್ಮ್ ಬಟ್ಟೆ ಕಾಣಿಸಿಕೊಂಡಿತು. ನಿಧಾನವಾಗಿ ಉಸಿರಿಡಿದುಕೊಂಡು ಬಾಬು ದೇವವನ್ನು ಕಲ್ಲುಮಣ್ಣಿನ ಕೆಳಗಿಂದ ಹೊರಕ್ಕೆ ತೆಗೆದು ನೋಡಿದರು! ಆತನ ದೇಹದ ಮೇಲಿನ ಯೂನಿಫಾರ್ಮ್ ಬಟ್ಟೆಗಳು ರಕ್ತದಿಂದ ಹೆಪ್ಪು ಕಟ್ಟಿಕೊಂಡಿದ್ದವು. ದೇಹ ನುಜ್ಜುಗುಜ್ಜಾಗಿ ಹೋಗಿತ್ತು. ದೊಡ್ಡ ಕಲ್ಲುಮಣ್ಣಿನ ರಾಶಿ ಅವನ ಮೇಲೆ ಕುಸಿದು ಬಿದ್ದು ಕೆಲವೇ ನಿಮಿಷಗಳಲ್ಲಿ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಅವನ ದೇಹವನ್ನು ನೋಡಿದ ಕಾರ್ಮಿಕರು ಸ್ವಲ್ಪ ಹೊತ್ತು ಏನೂ ಮಾತನಾಡದೆ ವಿದ್ಯುತ್ ಶಾಕ್ ಹೊಡೆದುಕೊಂಡಂತೆ ಹಾಗೇ ನಿಂತುಕೊಂಡೇ ಇದ್ದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ನೆದರ್‌ಲ್ಯಾಂಡ್ಸ್ ರಾಜಕಾರಣ- ಒಂದು ಅಪೂರ್ಣ ಅನುಬಂಧ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನಾಗರಿಕರನ್ನು ಸಾಕಬೇಕು, ಪೋಷಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ, ಅವರನ್ನು ಸಬಲಗೊಳಿಸಬೇಕು, ಅವರು ಸರ್ಕಾರ, ರಾಜ್ಯದ ಮೇಲೆ ಅವಲಂಬಿತರಾಗದ ಹಾಗೆ ನೋಡಿಕೊಳ್ಳಬೇಕು, ಹಾಗಾದಾಗ ಮುಂದೆ ಅವರೇ ದೇಶದ ಆರ್ಥಿಕ-ಸಾಮಾಜಿಕ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಾರೆ ಎಂಬುದು ಈ ಸಮಾಜದ ನಿಲುವು. ಉನ್ನತ ಮಟ್ಟದ ರಾಷ್ಟ್ರೀಯ ಆದಾಯ, ತಲಾವಾರ್ಷಿಕ ಆದಾಯದ ಹಂತವನ್ನು ತಲುಪಿದ ದೇಶದಲ್ಲಿ ಮಾತ್ರ ಇದು ಸಾಧ್ಯ. ಶ್ರೀಮಂತರು, ಚಕ್ರವರ್ತಿಗಳು ಇಲ್ಲವೆಂದಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಕೊನೆಯ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ