ಭೂಮ್ತಾಯಿ ಮ್ಯಾಗ್ಳ ಗಿಡ ಗಂಟಿ ಬುಟ್ರೆ ದಿಷ್ಟಿ ನಿವಾಳ್ಸೋದೇ ದೊಡ್ಡ ಮದ್ದು: ಸುಮಾ ಸತೀಶ್ ಸರಣಿ
ನಾವು ಉಣ್ಣಾವಾಗ ಒಂದು ಕಡಿಕ್ಕೆ ಕುಂತು ಉಂಡು, ಗೋಮೆ ಇಕ್ಕಿ ಎದ್ದೇಳ್ ಬೇಕು. ಅದ್ ಬುಟ್ಟಿ ಓಡಾಡೋ ಜಾಗದಾಗೆ ಉಂಡ್ರೆ, ತಟ್ಟೆಗ್ಳಾಗಿಂದ ಮುಸ್ರೆ ಪಸ್ರೆ ಚೆಲ್ಲಾಕಿಲ್ವೇ? ಅದುನ್ನ ಯಾರಾನಾ ತುಳುದ್ರೆ ಕಾಲ ರಂಜು ಆಗ್ತೈತೆ ಅಂತಿದ್ರು. ಭೂಮ್ತಾಯಿ ಕೊಡಾ ಅನ್ನವಾ ಅಂಗೆ ಮರ್ವಾದೆ ಇಲ್ದಂಗೆ ಚೆಲ್ಲೀರೆ, ಅದ್ನ ತುಳ್ದು ಪಳ್ದು ಮಾಡೀರೆ ನಮ್ಗೆ ಒಳ್ಳೇದಾಯ್ತೈತೆ? ಅಂಬೋರು. ಇದೂ ಒಂತರಾ ದಿಟವೇಯಾ. ಕಿಲೀನ್ ಆಗಿರ್ಬೇಕು ಅಂಬ್ತ ಪಾಠ ಹೇಳ್ತೈತೆ. ಭೂಮ್ತಾಯಿ ಕೊಡಾ ಪ್ರಸಾದ್ವ ಚೆಲ್ಬಾರ್ದು ಅಂತ್ಲೂ ಹೇಳ್ತೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಮದ್ದುಗಳ ಕುರಿತ ಬರಹ ನಿಮ್ಮ ಓದಿಗೆ