Advertisement
ರಂಜಿತ್ ಕವಲಪಾರ ಬರೆದ ಈ ದಿನದ ಕವಿತೆ

ರಂಜಿತ್ ಕವಲಪಾರ ಬರೆದ ಈ ದಿನದ ಕವಿತೆ

ಅವಳ ಪ್ರೀತಿಯ ವಾಂಛೆ

ಪ್ರತಿಸಾರಿ ಆವರಿಸಿ ಉಸಿರುಗಟ್ಟಿಸಿ ದಣಿಸಿ ನಗುವ ದುಶ್ಚಟ ಅವಳಿಗೆ .
ಕೊರಳ ಮೈ ಸ್ವರ್ಶ ಅರಸತ್ತಾ..ಬಯಸುತ್ತಾ .!

ತುಟಿಯಿಂದ ತುಟಿ ಹಿಂಡಿ ಹಿಪ್ಪೆಮಾಡಿ
ಎದೆಯ ಮೇಲಣ ತಲೆಯಿಟ್ಟು
ಹೆಣ್ಣು ಸರ್ಪದಂತೆ ಸರಿದಾಡಿ ಏಕಾ ಏಕಿ ದಾಳಿ ಮಾಡಿ.
ಬೆವರ ಹನಿಗಳೊಂದಿಗೆ ಪಿಸುಗುಟ್ಟುವ
ಅತಿರೇಕದ ವಾಂಛೆ ಅವಳದ್ದು.!

ದಣಿ ದಣಿಸಿ ಮತ್ತದೆ ಹುಸಿ ನಗು ನಕ್ಕು ಬರಿಗಾಲ
ಬೆರಳ ಗಂಧಕೆ ತಲೆದೂಗಿ.ತಿಂದು ತೇಗಿ,
ನಿಟ್ಟುಸಿರ ಹೊರದೂಡಿ
ಮಗದೊಮ್ಮೆ ದಣಿಸಲು ಹಠಮಾರಿಯಂತೆ
ಅನುವಾಗುತ್ತಾಳೆ .!

ಮುಂಗುರುಳ ತುದಿಯಿಂದ
ಏನೇನೊ ಗೀಚಿ ಕಣ್ಣ ರೆಪ್ಪೆಯ ತಂದು ಅಲ್ಲಲ್ಲಿ
ತಾಕಿಸಿ ಕಣ್ಣಮುಚ್ಚಾಲೆಯಾಡುತ್ತಾಳೆ.
ಮತ್ತೆಲ್ಲೊ ಮೌನದಿ ಕಣ್ಮರೆಯಾಗುತ್ತಾಳೆ!

ಕತ್ತು ಬಳಸಿ ಒತ್ತಿ ಹಿಡಿದು ಹಿತವಾಗೊಮ್ಮೆ
ಹಿಂಡಿ ವೇದನಿಸಿ.
ಏನನ್ನೊ ನೆನೆದು ಎದೆಯ ರೋಮ ತಣ್ಣಗಾಗುವಂತೆ
ನಿಟ್ಟುಸಿರ ಹೊರದೂಡುತ್ತಾಳೆ.!

ಅಂತರಂಗದ ಮನೆಯಲ್ಲಿ ಅವಳ ಪ್ರೀತಿಯ ವಾಂಛೆ
ಭೋರ್ಗರೆದು ಮರಳಿ ತಣ್ಣಗಾಗುವ ಶಾಂತ ಸಾಗರದ ಹಾಗೆ.!

 

ರಂಜಿತ್ ಕವಲಪಾರ ಭರವಸೆಯ ಯುವ ಬರಹಗಾರ.
ಇವರು ಕೊಡಗಿನ ಮಡಿಕೇರಿಯವರು.

 

(ಕಲೆ: ಪ್ಯಾಬ್ಲೋ ಪಿಕಾಸೋ)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. Ananth

    ಸೊಗಸಾಗಿದೆ

    Reply
  2. ಸಂಗೀತ ರವಿರಾಜ್

    ಚೆನ್ನಾಗಿದೆ ತುಂಬಾ
    ಕೊಡಗಿನ ಭರವಸೆಯ ಕವಿ ರಂಜಿತ್

    Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ