Advertisement
ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ

ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ

ನಕಲಿ ಬಣ್ಣಗಳ ರಂಗಿನೋಕುಳಿ
…………………………

ಬೆರಗಿನ ಚಿತ್ರ ಬೆಳಕಿನಲಿ ತೊಯ್ದು
ಫಳಫಳ ಎನ್ನುತಿದೆ
ಹಗಲಿನ ಹತ್ರ ಹೊದಿಸಲು ಏನೂ ಇಲ್ಲ
ಮರಮರ ಮರಗುತಿದೆ

ದಾರಿಯುದ್ದಕ್ಕೂ ದಾವಿಸಿಬರುವ ಗಾಳಿ
ಬಿಸಿಯಾಗಿ ಬೀಸುತಿದೆ
ಬದುಕಿನ ದಾರಿಯಲ್ಲೀಗ ತಲ್ಲಣಗಳ ಮಳೆ
ಸದ್ಧಿಲ್ಲದೇ ಸುರಿಯುತಿದೆ

ಆಚೆ ಈಚೆಯದರಾಚೆಗೂ ಒಂದು ಮಾತಿದೆ
ಹೊಗಳಿದರೆ ಹಬ್ಬವಾದೀತು
ಒಳಗಿನ ಒಳಗೆ ಒಳಗಾಗಿರುವ ಒಂದು ವಿಷಯ
ತೆಗಳಿದ್ದಕ್ಕೆ ಮಾತೇ ಹೊರಬರುತ್ತಿಲ್ಲ

ಅಸಲಿ ರಂಗೋಲಿಯ ಎದುರು ನಕಲಿ ಬಣ್ಣ
ರಂಗಾಗಿ ಕುಣಿಯುತಿದೆ
ಯಾರಿಗೂ ವೃತ್ತದ ಒಳಗಿನ ಗೋಲಿಗೆ
ಪೋಲಿತನ ಮಾಡುವ ಮನಸ್ಸಿಲ್ಲ

ಕೊಳೆತು ನಾರುವ ಚರಂಡಿಯ ಬದಿಯಲಿ
ಮೊಳಕೆಯೊಡೆಯುತಿದೆ ಕಲ್ಪವೃಕ್ಷ
ಹಸಿದವನ ಹಸಿವಿಗೆ ಬಹುದೂರದಲ್ಲಿ ನಿಂತು
ಪಟಾಕಿಹೊಡೆದವರ ಸಾಕ್ಷಿ.

ಸುರೇಶ ಎಲ್.ರಾಜಮಾನೆ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯವರು.
ಸಧ್ಯ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಪ್ರಾಥಮಿಕಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿತೆ ಕಥೆ ಗಜಲ್ ಬರವಣಿಗೆ ಇವರ ಹವ್ಯಾಸ.
‘ಸುಡುವ ಬೆಂಕಿಯ ನಗು’, ‘ಮೌನ ಯುದ್ಧ ಮಾತಿಗೂ ಮನಸಿಗೂ’ ಎಂಬ ಎರಡು ಕವನಸಂಕಲನಗಳು ಪ್ರಕಟವಾಗಿವೆ.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ