Advertisement
ನರೇಂದ್ರ ಶಿವನಗೆರೆ ಬರೆದ ಹೊಸ ಕವಿತೆ

ನರೇಂದ್ರ ಶಿವನಗೆರೆ ಬರೆದ ಹೊಸ ಕವಿತೆ

ಜುಗ್ರ

ಎಲ್ಲೋ ಹುಟ್ಟಿ
ಇಲ್ಲಿ
ಬಂಧಿಯಾದ,

ನೂರರ ಮುದುಕನಿಗೆ
ಮೈ ತುಂಬ
ಚರಿತ್ರೆಯ ಸುಕ್ಕುಗಳು!


ಮಳೆಗಾಲದ
ಕೆಂಪುಸಂಜೆಯ ಮೌನ.
ಬಿರುಸುಯ್ಯುವ ಕಡಲು!

ಮಲಯ ದ್ವೀಪಗಳ
ಶಾಂತ ಬದುಕು.
ಎಂದಿಗೂ ಬಿಡುಗಡೆಯಿಲ್ಲದ
ನನ್ನೂರ
ಮಣ್ಣಿನ ವಾಸನೆ!

ದೂರದೇಶದ ಹಡಗನೇರಿ
ದೇಶಬಿಟ್ಟವನಿಗೆ
ಕಡಲ ತೆರೆಯ
ಆಸರೆ!
ಮಲಯ ದ್ವೀಪಗಳ
ಮಾಯೆ!

ನನ್ನೊರ ಸ್ವಾತಂತ್ರ್ಯಕ್ಕೆ
ಸುಭಾಶ್ಚಂದ್ರ ಬೋಸರು
ಇನ್ನಿಲ್ಲದೆ ಕರೆದಾಗ!
ಬರ್ಮಾ ದೇಶದ ದಟ್ಟ ಕಾಡಲ್ಲಿ
ಹೋರಾಡಿದ ನೆನಪು!
ಕುಂಡೆಯಲ್ಲೇ ಉಳಿದುಹೋದ
ಬ್ರಿಟಿಶ್ ಸಾಮ್ರಾಜ್ಯದ
ಕಾಡತೂಸ ಗುರುತು!


ಮಳೆಗಾಲದ ಸಂಜೆಗಳಿಗೆ
ನೆನಪುಗಳ ದಾಳಿ!
ಅವ್ವನ ಗಂಜಿಯ ನೆನಪು.
ಘಮಲು!
ಎದುರಿಗೆ ಕಡಲು.
ದೂರದಲ್ಲಿ!
ದೇಶದೇಶ ಹುಡುಕುತ್ತಾ ಹಡಗುಗಳು.
ಬಿಡುಗಡೆಗೆ
ಕಾಯುತ್ತಾ, ಬದುಕು!

About The Author

ನರೇಂದ್ರ ಶಿವನಗೆರೆ

ವೃತ್ತಿಯಲ್ಲಿ ವಿಜ್ಞಾನದ ಮೇಸ್ಟ್ರು, ಸಾಹಿತ್ಯ ಮತ್ತು ಪ್ರಪಂಚದ ಸಿನಿಮಾ ಬಗ್ಗೆ ತುಂಬಾ ಆಸಕ್ತಿ. ಕಳೆದ ಹತ್ತು ವರ್ಷಗಳಿಂದ ದೇಶ ಬಿಟ್ಟು ಅಲೆಮಾರಿ.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ