Advertisement
ವಸ್ತಾರೆ ಬರೆದ ದಿನದ ಕವಿತೆ

ವಸ್ತಾರೆ ಬರೆದ ದಿನದ ಕವಿತೆ

ಅಡಚಣೆ

ಕಡಲಿನ ಗೊತ್ತಿರುವ ಈ ಬದಿ ನಿಂತು
ಅಗಾಧ ದೂರದ
ಆಕಾಶದಂಚನ್ನು ನಿನ್ನೊಟ್ಟಿಗೆ ಕನಸುತ್ತಿದ್ದೆ.
ಸವೆಯುತ್ತಿತ್ತು ಹಗಲು.

ನೀರು ಮತ್ತು ಆಕಾಶ ಒಂದಕ್ಕೊಂದು
ಬೆಸೆದುಕೊಳ್ಳುವವರೆಗೆ-
ತುದಿ ಅಂತಿದ್ದಿದ್ದರೆ ಅಗೋ ಅಲ್ಲಿಯವರೆಗೆ
ಬೆಳಕೋ ಬೆಳಕು. ಆಗ ಸಂಜೆಗೆ ಚಿನ್ನದ ರೇಕು.

ತೆಕ್ಕೆಗೆ ತೆಕ್ಕೆ, ಅಗಣಿತ ಮುತ್ತು
ಗಳ ನಡುವೆ- ಕಡಲಿಗೆ ಬದಿಯೆಂಬುದಿದ್ದರೆ
ಅದು ನೆಲವೇ ಇದ್ದೀತು, ಆಕಾಶವಲ್ಲ
ಎಂದು ತಿದ್ದಿದೆ ನೀನು.

ನಿನ್ನೊಳಗೆ ಕದಡಿಕೊಂಡಿರುವ ನನಗೆ
ನಿನ್ನ ವಸ್ತುನಿಷ್ಠ ನಿಷ್ಠುರಗಳೇ
ಅಡಚಣೆ ಯಾವತ್ತಿಗೂ

(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು)

About The Author

ನಾಗರಾಜ ವಸ್ತಾರೆ

ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ