Advertisement
ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

‘ಕೊರೊನಾ’ ದಿನಗಳು

ಮಧ್ಯಾಹ್ನದ
ಬೋರಲುಬಿದ್ದ
ಕ್ಷಣಗಳು
ನನ್ನನ್ನು ಸಾಯಿಸುತ್ತಿವೆ
ಎನ್ನುವುದಕ್ಕಿಂತ
ಗುಟುಕು ಜೀವವನ್ನು
ಸಲಹುತ್ತಿವೆ..

ಜೀರುಂಡೆಗಳ
ಸಂಗೀತ ಕಛೇರಿಗೆ
ಇಂಥದೇ
ಸಮಯವಿಲ್ಲ;
ನೆರಳು ಬಿಡಿಸುವ
ಚಿತ್ರ ಜಗತ್ತಿನ ಯಾವ
ಚಿತ್ರಕಾರನೂ ಬಿಡಿಸದೇ
ಉಳಿದ ಕಲಾಕೃತಿಯಂತೆ
ಇಲ್ಲೇ ವಿರಮಿಸಿದೆ..

ಪಾಳುಬಿದ್ದ ಈ
ಹಾಳು ಶಹರವೀಗ
ದೀರ್ಘ ನಿಟ್ಟುಸಿರಿಟ್ಟಿದೆ;
ಗೋರಿಯೊಳಗಿನ
ಮೌನ ಕೇಳಿಸುತ್ತಿದೆ;
ದಫನವಾಗದ ನೆನಪಿನ
ರಾತ್ರಿಗಳು ನಗ್ನವಾಗಿ
ನರ್ತಿಸುತ್ತಿವೆ..

ಸವೆಯದ
ಚಪ್ಪಲಿಗಳೀಗ
ನವ ವಧುವರರಂತೆ
ಬಿಟ್ಟಿರಲಾರದಂತೆ
ಬಾಗಿಲಲ್ಲೇ ಸುಖಿಸುತ್ತಿವೆ;
ಮೂಲೆಯಲ್ಲಿಟ್ಟ
ಗುಲಾಬಿ ಗಿಡವೀಗ
ಮೊಗ್ಗು ಕಚ್ಚಿ ಚಿಗುರಲಾರಂಭಿಸಿದೆ;
ನಿದ್ರಾಹೀನ ರಸ್ತೆಗಳು
ಸ್ವಚ್ಛಂದವಾಗಿ
ನಿದ್ರೆಹೋಗಿವೆ..

ವಟಗುಟ್ಟುವ ನಿನ್ನ
ಮಾತುಗಳ
ಪ್ರತಿಧ್ವನಿಯಷ್ಟೇ ಅನುರಣಿಸುತ್ತಿದೆ;
ತುಟಿಯನ್ನು
ಒತ್ತಿದ
ಮೌನದ ಮಹಲಿನಲ್ಲಿ
ನಿನ್ನನ್ನು
ಸ್ಪರ್ಶಿಸದ ಈ ದಿನಗಳು
ನನ್ನನ್ನು ನಿಜ ಮನುಷ್ಯನನ್ನಾಗಿಸಿವೆ…!

 

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ