Advertisement
ಅನುಪಮಾ ಪ್ರಸಾದ್ ಬರೆದ ದಿನದ ಕವಿತೆ

ಅನುಪಮಾ ಪ್ರಸಾದ್ ಬರೆದ ದಿನದ ಕವಿತೆ

ಭೈರವ

ಬೆಟ್ಟದ ತಪ್ಪಲಲಿ ಬಿರಬಿರ ನಡೆಯುತ್ತಿದ್ದೆ
ಅವನ
ದನಿ ಕೇಳುವ ಮೊದಲೇ ದಾಟಿಬಿಡುವೆನೆಂದು
ಹಾಡಿದರೆ ಭೈರವಾ
ನೀರಾಗದೆ ಸೈರಿಸಲಾರೆ ನಾ
“ಕಂಡೆ ಕಂಡೆ ಚಿತ್ತದೊಳಗೆ ಚಿತ್ರ”
ಆಹ್!
ಎದೆಗಿಳಿದು ಅಟ್ಟಾಡಿಸಿತು ಸೊಲ್ಲು
ಹಿಡಿದು ನಿಲ್ಲಿಸಿತು
ಜೀವಧನಿ
ಚೂಪುಗಣ್ಣಿನ ವಜ್ರ ನೋಟ
ಕಡೆದ ಮುಖದಲಿ ಜೀವರಸ
ಚಿತ್ತದೊಳಗೆ ಚಿತ್ರ
ಯೋಗವಲ್ಲ ವ್ಯಾಯಾಮವಲ್ಲ
ಜಿಮ್-ನಡಿಗೆಯಲ್ಲ
ಕನ್ನೆ ನೆಲದಲಿ ಧಿಮಿಧಿಮಿ ಕುಣಿವ
ಮಣ್ಣು ಮಿದ್ದುತ ಕಾಯ ಕಡೆಯುತ
ನೆಲದೊಳಗೆ ಬೇರಿಳಿಸಿ ಬಾನಿಗೆ ಹೆದೆ ಏರಿಸಿ
ಠೇಂಕರಿಸುವ ಬೆನ್ನುಹುರಿ
ಚಿತ್ತದೊಳಗೆ ಚಿತ್ರ
ನೀರು ಕೊರೆದ ಕಾರ್ಗಲ್ಲಿನ ಹೊಳೆಹೊಳೆವ
ಫಳಗುಡುವ ಕಟುದೇಹ
ಮಾಗಿಯ ಶೀತಕೆ ಸಡ್ಡು ಹೊಡೆವ ತೆರೆದೆದೆ
ನೆತ್ತಿ ಮೇಲಿಳಿದ ಸುಡು ಶಾಖ ಅಂಗಾಲಿಗಿಳಿದರೂ
ಕಾರ್ಗಾಲದ ಮಳೆ ಕೋಲಿನ ಹೊಡೆತಕೆ ಹುರಿಗಟ್ಟಿದ ಜೀವ
ಕಂಡೆ ಕಂಡೆ ಚಿತ್ತದೊಳಗೆ ಚಿತ್ರ
ತೆರೆದೆದೆಯ ಭೈರವ ತೋಳು ತೆರೆದು ನಸು ನಕ್ಕ
ಸೇರಿಕೊಳ್ಳುವ ಕಾತರ ನಾನೇರುತ್ತಿದ್ದೆ
ಸೇರಿಸಿಕೊಳ್ಳುವ ಆತುರ ಅವನಿಳಿಯುತ್ತಿದ್ದ..

 

ಅನುಪಮಾ ಪ್ರಸಾದ್ ಹೆಸರಾಂತ ಕಥೆಗಾರ್ತಿ ಮತ್ತು ಕವಯಿತ್ರಿ.
ಮೂಲತಃ ಉತ್ತರ ಕನ್ನಡದ ಶಿರಸಿಯವರು.ಈಗ ಕಾಸರಗೋಡಿನ ನೀರ್ಚಾಲಿನಲ್ಲಿ ವಾಸ.
ಜೋಗತಿ ಜೋಳಿಗೆ ಇವರ ಇತ್ತೀಚಿನ ಕಥಾ ಸಂಕಲನ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ