Advertisement
ಜಿ.ಪಿ. ಬಸವರಾಜು ಬರೆದ ಈ ದಿನದ ಕವಿತೆ

ಜಿ.ಪಿ. ಬಸವರಾಜು ಬರೆದ ಈ ದಿನದ ಕವಿತೆ

ತಾವರೆ

ತಂಗಾಳಿ ಮುತ್ತಿಕ್ಕೆ
ಕೊಳ ಕಂಪಿಸಿತು
ಕಿರುದೆರೆಗಳೆದ್ದು
ತಾವರೆಯು ನಕ್ಕಿತು

ಕೊಳದ ಕನ್ನಡಿಯಲ್ಲಿ
ಶಿಷ್ಯರ ಬಿಂಬ ಕಂಡು
ಬುದ್ಧಗುರುವಿನ ಮೌನ
ತುಟಿಬಿರಿದು ಅರಳಿತು
ಇನ್ನೊಂದು ತಾವರೆ

ಕೊಳಕ್ಕಿಳಿದ ಶಿಷ್ಯನೊಬ್ಬ
ಕಮಲದ ದಂಟನ್ನು
ಮುರಿದು ಹೂತಂದು
ಅರ್ಪಿಸಿದ ಗುರುವಿಗೆ

ಕರುಣಾಳು ಬುದ್ಧನ
ಕಣ್ಣಂಚಿನಲಿ ನೀರು
ಗೋಣು ಮುರಿದ
ತಾವರೆಯ ಕಂಡು

ಮೃದುವಾಗಿ ನೇವರಿಸಿ
ಕಂಬನಿಯನೊರೆಸಿದ
ದಳದಳದಲ್ಲಿ ನೀರಹನಿ
ಮುತ್ತಾಗಿ ಹೊಳೆದು

ಗುರುವಿನ ಕಣ್ಣಂಚಿನ ನೀರು
ಶಿಷ್ಯರೆದೆಯಲ್ಲಿ ಜಿನುಗಿ
ಕೊಳಗಳೆದ್ದವು ಒಳಗೆ
ಅಲ್ಲಿ ಅರಳಿದವು ತಾವರೆ

ಪದ್ಮಾಸನ ಭಂಗಿಯಲಿ
ದಳದಳದ ಮೇಲೆ ಕುಳಿತ
ಗುರು ನಗುತಿದ್ದ
ತಾವರೆಯೆ ತಾನಾಗಿ

 

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ

 

(ಕಲಾಕೃತಿ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. .ಮಹೇಶ್ವರಿ.ಯು

    ಚಂದದ ಕವಿತೆ .ನನಗಿಷ್ಟವಾಯಿತು

    Reply
    • gp basavaraju

      thank you maheswari ma’am

      Reply

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ